`ಭಟ್ಕಳದಲ್ಲಿ ಮುರಿತಕ್ಕೊಳಗಾದ ಮೂರಿನಕಟ್ಟೆಯನ್ನು ಮೊದಲಿದ್ದ ಸ್ಥಳದಲ್ಲಿಯೇ ಸ್ಥಾಪಿಸಲಾಗುತ್ತದೆ. ಜಿಲ್ಲಾಡಳಿತದ ಜೊತೆ ಸಾಕಷ್ಟು ಸಭೆ ನಡೆಸಿದ ನಂತರ ಈ ಬಗ್ಗೆ ಅಂತಿಮ ನಿಧಾರಕ್ಕೆ ಬರಲಾಗಿದ್ದು, ಹೆದ್ದಾರಿ ಡಿವೈಡರನಲ್ಲಿ ಮೂಲ ಮೂರಿನಕಟ್ಟೆಯನ್ನು ಯಥಾಸ್ಥಿತಿಯಲ್ಲಿ ನಿರ್ಮಾಣ ಮಾಡುವದಕ್ಕೆ ಜಿಲ್ಲಾಢಳಿತದಿಂದ ಶೀಘ್ರ ರೂಪರೇಷೆಗಳು ನಡೆಸಲಾಗುತ್ತದೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಹೆದ್ದಾರಿ ಅಗಲೀಕರಣದ ಹಿನ್ನೆಲೆ ಹೆದ್ದಾರಿ ಪಕ್ಕದಲ್ಲಿಯೇ ನೂತನ ಮೂರಿನಕಟ್ಟೆಯನ್ನು ಕಟ್ಟಲಾಗಿತ್ತು. ಆದರೆ, ಕೆಲ ಯುವಕರ ತಂಡವು ಅಲ್ಲಿ ಕಟ್ಟಲಾದ ಕಟ್ಟೆಯನ್ನು ಧ್ವಂಸಗೊಳಿಸಿ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದರು. ಆ ದಿನ ರಾತ್ರಿ ಹಿಂದು ಸಂಘಟನೆ ಹಾಗೂ ಬಿಜೆಪಿ ಪಕ್ಷದ ಮುಖಂಡರಿAದ ಘಟನೆಯ ಖಂಡಿಸಿ ಪ್ರತಿಭಟಿಸಿ ಮರು ನಿರ್ಮಾಣಕ್ಕೆ ಆಗ್ರಹಿಸಲಾಗಿದ್ದು, ಪ್ರತಿಭಟನಾಕಾರರ ಮೇಲೆಯೂ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದ್ದು, ಕಾನೂನಾತ್ಮಕ ರೀತಿಯಲ್ಲಿ ಹಾಗೂ ಸಂಘಟನೆಗಳ ಮೂಲಕ ಸಾಕಷ್ಟು ಸಭೆ ನಡೆಸಿದ ಬಳಿಕ ಮೂಲ ಮೂರಿನಕಟ್ಟೆಯನ್ನು ಹೆದ್ದಾರಿಯ ರಸ್ತೆ ವಿಭಜಕದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂಬ ಮಾಹಿತಿ ನೀಡಿದರು.
`ಮೂರಿನಕಟ್ಟೆಯ ವಿಚಾರದ ವಿವಾದವನ್ನು ಆದಷ್ಟು ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಮೂರಿನಕಟ್ಟೆಯಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆ ಅಥವಾ ಅವರ ಚಟುವಟಿಕೆಗೆ ಸಮಸ್ಯೆ ಇಲ್ಲವಾಗಿದ್ದು, ಇದರಲ್ಲಿ ಅವರು ಮೂಗು ತೂರಿಸುವ ಅವಶ್ಯಕತೆ ಇಲ್ಲ. ಇದು ಆಡಳಿತಾತ್ಮಕ ತೀರ್ಮಾನದಂತೆ ಮುಂದುವರೆಯಲಿದೆ’ ಎಂದರು.