ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 4ರಿಂದ ಮುಂದಿನ ನಾಲ್ಕು ದಿನ ಮಳೆಯಾಗುವ ಲಕ್ಷಣಗಳಿವೆ. ಜೂನ್ 4 ಹಾಗೂ 5ರಂದು ಮಧ್ಯಮ ಪ್ರಮಾಣದ ಮಳೆಯಾಗಲಿದ್ದು, ಜೂನ್ 6ರಿಂದ 10ರವರೆಗೆ ಜೋರು ಮಳೆಯಾಗುವ ಸಾಧ್ಯತೆಗಳಿವೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮಳೆ ಮಾಹಿತಿ ಹಾಗೂ ಮುನ್ನಚ್ಚರಿಕೆ ನೀಡಿದೆ. ಈ ಹಿನ್ನಲೆ ಜಿಲ್ಲಾಡಳಿತ ಉತ್ತರ ಕನ್ನಡದಲ್ಲಿ 294 ಕಾಳಜಿ ಕೇಂದ್ರಗಳನ್ನು ಗುರುತಿಸಿದ್ದು, ಅದಕ್ಕೆ ಅಧಿಕಾರಿಗಳನ್ನು ನೇಮಿಸಿದೆ. ಜಿಎಸ್ಐ 439 ಭೂಕುಸಿತ ಸಂಭವನೀಯ ಸ್ಥಳಗಳ ಪಟ್ಟಿ ನೀಡಿದ್ದು, ಸದರಿ ಭೂಕುಸಿತ ಸಂಭವನೀಯ ಸ್ಥಳಗಳಿಗೆ ನಿರಂತರ ಮೇಲ್ವಿಚಾರಣೆಗಾಗಿ ಸ್ಪಾರ್ಸ್’ಗಳನ್ನು ನೇಮಕ ಮಾಡಲಾಗಿದೆ.
ಇದರೊಂದಿಗೆ ಚರಂಡಿಗಳಲ್ಲಿ ಹೂಳೆತ್ತುವ ಹಾಗೂ ಸ್ವಚ್ಛಗೊಳಿಸುವ ಮೊದಲನೇ ಸುತ್ತಿನ ಕಾರ್ಯವನ್ನು ಈಗಾಗಲೇ ಸ್ಥಳೀಯ ಸಂಸ್ಥೆಗಳಿAದ ಪೂರ್ಣಗೊಳಿಸಲಾಗಿದೆ. ಮಳೆ ಪ್ರಮಾಣ ಪರಿಶೀಲಿಸಿಕೊಂಡು ಈ ಕಾರ್ಯವನ್ನು ಮುಂದುವರೆಸಲಾಗುವುದು. ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಇತರೆ ಸರ್ಕಾರಿ ಕಟ್ಟಡಗಳ ಸುರಕ್ಷತೆಯನ್ನು ಪಾಲಿಸಲು ಸಂಬAಧಿಸಿದ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ. ಬಿಎಸ್ಎನ್ಎಲ್ ಮತ್ತು ಹೆಸ್ಕಾಂ ಇಲಾಖೆಗಳು ಮಳೆಗಾಲದಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು ಕ್ರೋಡಿಕರಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ 24*7 ಸಕ್ರಿಯವಾಗಿದ್ದು, ಸಾರ್ವಜನಿಕರು ಯಾವುದೇ ತೊಂದರೆಗಳಿದ್ದಲ್ಲಿ ಆಯಾ ತಾಲ್ಲೂಕಿನ ಹಾಗೂ ಜಿಲ್ಲೆಯ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವoತೆ ಮನವಿ ಮಾಡಲಾಗಿದೆ. ಜಿಲ್ಲಾ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08382-229857, ಮೊ. 9483511015. ಇದರೊಂದಿಗೆ ಇನ್ನಿತರ ಸಹಾಯವಾಣಿಗಳ ಸಂಖ್ಯೆ ಇಂತಿದೆ:
ಪೊಲೀಸ್ ಕಂಟ್ರೋಲ್ ರೂಂ. ದೂ. ಸಂ:08382-226550, 9480805200, ತಾಲೂಕು ಕಂಟ್ರೋಲ್ ರೂಂ ಕಾರವಾರ 08382-223350, ಅಂಕೋಲಾ 08388-230243, ಕುಮಟಾ 08386-222054, ಹೊನ್ನಾವರ 08387-220262, ಭಟ್ಕಳ 08385-226422, ಶಿರಸಿ 9448769569, ಸಿದ್ದಾಪುರ 08389-230127, ಯಲ್ಲಾಪುರ 9902571927, ಮುಂಡಗೋಡ 08301-222122, ಹಳಿಯಾಳ 08284-220134, ಜೋಯಿಡಾ 8310703169, ದಾಂಡೇಲಿ 08284-295959