ಕಾಡು ಮಾಂಸದ ಆಸೆಗಾಗಿ ಬಂದೂಕು ಹಿಡಿದು ಮೂವರು ಅರಣ್ಯದಲ್ಲಿ ಅಲೆದಾಡಿದ್ದು, ಅವರು ಹಾರಿಸಿದ ಗುಂಡು ಎರಡು ಪ್ರಾಣಿಗಳನ್ನು ಕೊಂದಿದೆ. ಹೀಗಾಗಿ ಸಿದ್ದಾಪುರದ ಅರಣ್ಯಾಧಿಕಾರಿಗಳು ಆ ಮೂವರನ್ನು ಬಂಧಿಸಿದ್ದಾರೆ.
ಸಿದ್ದಾಪುರದ ಮಾವಿನಗುಂಡಿ ಬಳಿ ಹಲಗೇರಿಯಲ್ಲಿ ಗುಂಡಿನ ಸದ್ದು ಕೇಳಿಸಿದೆ. ಸದ್ದು ಕೇಳಿದ ಜಾಗದ ಕಡೆ ಹೋದ ಅರಣ್ಯ ಸಿಬ್ಬಂದಿಗೆ ಅಲ್ಲಿ ಕಡವೆ ಹಾಗೂ ಸಣ್ಣ ಜಿಂಕೆಯ ಶವ ಸಿಕ್ಕಿದೆ. ಮಹೇಂದ್ರ ಪಿಕಪ್ ಒಳಗೆ ಆ ಕಾಡು ಜೀವಿಯ ಶವ ಸಾಗಿಸುತ್ತಿದ್ದವರನ್ನು ಅರಣ್ಯ ಅಧಿಕಾರಿಗಳು ಹಿಡಿದಿದ್ದಾರೆ. ಹುಸೂರಿನ ವೀರೇಂದ್ರ ಮಾರುತಿ ನಾಯ್ಕ, ಕುಂಬಾರಕುಳಿಯ ಶಿವಾನಂದ ಮಹಾಬಲೇಶ್ವರ ನಾಯ್ಕ ಹಾಗೂ ಸುಂಕತ್ತಿಯ ವಾಸುದೇವ ಈರ ನಾಯ್ಕ ಭೇಟೆಗಾರರಾಗಿದ್ದು ಇದೀಗ ಜೈಲು ಸೇರಿದ್ದಾರೆ. ಅವರ ಬಳಿಯಿದ್ದ ಪ್ರಾಣಿಗಳ ಕಳೆಬರಹ ಹಾಗೂ ಬಂದೂಕನ್ನು ಅಧಿಕಾರಿಗಳು ಜಪ್ತು ಮಾಡಿದ್ದಾರೆ.
ಸಿದ್ದಾಪುರ ವಲಯ ಅರಣ್ಯಾಧಿಕಾರಿ ಅಜಯಕುಮಾರ್ ಎಮ್ ಎಸ್. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಆರ್ ಡಿ, ಗುಲಶೀರ್ ಎಮ್ ನದಾಫ್, ಗುಡದಯ್ಯ ಅಪ್ಪಿನಬೈಲ್, ಅಡಿವೆಪ್ಪ ಸಂಗಪ್ಪ ಕನ್ನೂರ, ಗಸ್ತು ವನಪಾಲಕರುಗಳಾದ ಹನುಮಂತಪ್ಪ ಬಿ ಕಿಲಾರಿ, ಮಾರುತಿ ನಾಯ್ಕ, ನೀಲಗಿರಿ ಶಿವಬಸಣ್ಣನವರ, ಅಶೋಕ ಎಲ್ ಬಿ, ವೆಂಕಟೇಶ ಪೇಟಿಮಠ ಮತ್ತು ವಾಹನ ಚಾಲಕರಾದ ಗಣಪತಿ ಹಾಗೂ ಶೇಖರ ಭಾಗವಹಿಸಿದ್ದರು.