ಹಿರಿಯ ಮುತ್ಸದ್ಧಿ, ಚತುರ ರಾಜಕಾರಣಿ, ಅಭಿವೃದ್ಧಿ ವಿಷಯವಾಗಿ ಅಪಾರ ಅನುಭವವಿರುವ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಯಲ್ಲಾಪುರದಲ್ಲಿ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.
ದೇಶಪಾಂಡೆ ಅಭಿಮಾನಿಗಳ ಬಳಗದ ಡಿ ಎನ್ ಗಾಂವ್ಕರ ನೇತೃತ್ವದಲ್ಲಿ ಈ ಕುರಿತು ಹಕ್ಕೊತ್ತಾಯ ಸಭೆ ನಡೆದಿದೆ. ಅದಾದ ನಂತರ ಡಿ ಎನ್ ಗಾಂವ್ಕರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಆರ್ ದೇಶಪಾಂಡೆಯವರ ಸೇವಾ ಹಿರಿತನ ಗಮನಿಸಿ ಕಾಂಗ್ರೆಸ್ ಪಕ್ಷ ಅವರಿಗೆ ಸಚಿವ ಸ್ಥಾನ ಕೊಡಬೇಕು. ಮೊದಲ ಹಂತದಲ್ಲಿಯೇ ಉಪಮುಖ್ಯಮಂತ್ರಿ ಸ್ಥಾನ ಕೊಡುವ ನಿರೀಕ್ಷೆ ಇದ್ದು, ಅದು ಸಿಗದಿರುವ ಕಾರಣ ಬೇಸರವಾಗಿದೆ. ಸದ್ಯ ಸಂಪುಟ ವಿಸ್ತರಣೆಯ ವೇಳೆಯಲ್ಲಾದರೂ ಅವರಿಗೆ ಪ್ರಮುಖ ಖಾತೆ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
`ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೊಡದೇ ಇದ್ದರೆ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಎಲ್ಲಡೆ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಸಹ ಅವರು ಎಚ್ಚರಿಸಿದ್ದಾರೆ. `ಆರ್ ವಿ ದೇಶಪಾಂಡೆಯವರು 9 ಬಾರಿ ಶಾಸಕರಾಗಿ, ದೀಘ9ಕಾಲ ಮಂತ್ರಿಗಳಾಗಿ ಅನುಭವ ಹೊಂದಿದ್ದಾರೆ. ಅವರ ಅಪಾರ ಅನುಭವವನ್ನು ಸರ್ಕಾರ ಬಳಸಿಕೊಳ್ಳಬೇಕು’ ಎಂದು ಹೇಳಿದ್ದಾರೆ. ಪ್ರಮುಖರಾದ ವಿ ವಿ ಜೋಶಿ ಹಾಗೂ ಬಾಬಾಜಾನ್ ಶೇಖ್ ಮಾತನಾಡಿ, `ಆರ್ ವಿ ದೇಶಪಾಂಡೆಯವರು ಸಚಿವರಾಗಿದ್ದ ಕಾಲದಲ್ಲಿ ರಾಜ್ಯ, ಜಿಲ್ಲೆ ಅಪಾರ ಅಭಿವೃದ್ಧಿ ಕಂಡಿದೆ. ಮತ್ತೆ ಅವರು ಸಚಿವರಾದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕಾಯಕಲ್ಪ ಸಿಗಲಿದೆ’ ಎಂದಿದ್ದಾರೆ. ದೇಶಪಾಂಡೆ ಅಭಿಮಾನಿ ಬಳಗದ ವಿ ಟಿ ಭಾಗ್ವತ, ಎನ್ ಎನ್ ಹೆಬ್ಬಾರ, ನಂದನ ಬಾಳಗಿ, ಬಾಬು ಸಿದ್ದಿ, ಕೈಸರ್ ಅಲಿ, ಅಕ್ಷಯ ರೇವಣಕರ, ವಿ ಜಿ ಭಾಗ್ವತ, ಜಿ ವಿ ಭಟ್ಟ, ರಾಘವೇಂದ್ರ ಕುಣಬಿ, ಶೇಖರ ಗೋಸಾವಿ, ಅಶ್ಪಾಕ್ ಪಟೇಲ್, ನವೀದ್ ಖಾನ್, ಅಣ್ಣಪ್ಪ ನಾಯ್ಕ ಅವರು ಈ ಬಗ್ಗೆ ಆಗ್ರಹಿಸಿದ್ದಾರೆ.
ಕಳೆದ ಅವಧಿಯಲ್ಲಿ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಬೇಸರ ತಂದಿದೆ. ಸದ್ಯ ಡಿಕೆ ಶಿವಕುಮಾರ ಅವರ ನೇತ್ರತ್ವದ ಸರ್ಕಾರದಲ್ಲಿ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದು, ನಮ್ಮ ಬೇಡಿಕೆಗೆ ಕಾಂಗ್ರೆಸ್ ಸ್ಪಂದಿಸುವ ಸಾಧ್ಯತೆಯಿದೆ. ಶಿಸ್ತಿನ ಶಾಸಕ ದೇಶಪಾಂಡೆ ಅವರ ಅನುಭವವನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳಬೇಕು.
ಬಾಬು ಸಿದ್ದಿ, ಕಾಂಗ್ರೆಸ್ ಮುಖಂಡರು ಯಲ್ಲಾಪುರ