ಅಂಕೋಲಾ ಪೂಜಗೇರಿಯ ಕಾಲೇಜು ಕನ್ಯೆಗೆ ಕಾಟ ಕೊಟ್ಟ ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಅವರು ಊರು ತೊರೆದಿದ್ದಾರೆ. ಅವರನ್ನು ಹುಡುಕಿ ಪೊಲೀಸರು ಮನೆಯವರೆಗೂ ತೆರಳಿದ್ದು, ಅಲ್ಲಿ ರಾಮಚಂದ್ರ ಅಂಕೋಲೇಕರ್ ಸಿಗಲಿಲ್ಲ. ಹೀಗಾಗಿ ಪೊಲೀಸರು ಆರೋಪಿಗೆ ಆಶ್ರಯ ನೀಡಿದ ಇಬ್ಬರನ್ನು ವಶಕ್ಕೆಪಡೆದಿದ್ದಾರೆ.
ಅಂಕೋಲಾ ಪೂಜಗೇರಿ ಕಾಲೇಜು ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ಕಾಮ ಪಾಠ ಮಾಡಿದ ಹಿನ್ನಲೆ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿ ಸಹ ಪೊಲೀಸ್ ದೂರು ದಾಖಲಿಸಿದ್ದು, ಮಂಗಳವಾರ ನೂರಾರು ಜನ ಪ್ರತಿಭಟಿಸಿದ ಹಿನ್ನಲೆ ಪೊಲೀಸರ ಮೇಲೆ ಒತ್ತಡ ಬಂದಿತು. ಪೊಲೀಸರು ಬಂಧಿಸುವ ಸಾಧ್ಯತೆ ಅರಿತ ರಾಮಚಂದ್ರ ಅಂಕೋಲೇಕರ್ ಊರು ಬಿಟ್ಟರು. ಅವರು ಸದ್ಯ ಗೋವಾ ಕಡೆ ಪ್ರವಾಸದಲ್ಲಿರುವ ಬಗ್ಗೆ ಮಾಹಿತಿಯಿದ್ದು, ಅಲ್ಲಿಯೂ ಶೋಧ ನಡೆಯುತ್ತಿದೆ.
ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಅವರಿಗೆ ಆಶ್ರಯನೀಡಿದ್ದ ಗೋಕರ್ಣ ಬಳಿಯ ನಾಗರಾಜ್ ಗೌಡ ಮತ್ತು ವಾಸು ಎಂಬಾತರನ್ನು ಸದ್ಯ ಪೊಲೀಸರು ವಶಕ್ಕೆಪಡೆದಿದ್ದಾರೆ. ಉಪನ್ಯಾಸಕರನ್ನು ಗೋವಾ ಗಡಿಯವರೆಗೂ ಬಿಟ್ಟು ಬಂದ ಆರೋಪ ಅವರ ಮೇಲಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.