ಮುರುಡೇಶ್ವರದ ಆರ್ ಎನ್ ಎಸ್ ಡಿಪ್ಲೋಮಾ ಕಾಲೇಜಿನ ಉದ್ಯೋಗಿ ಅರುಣಕುಮಾರ ಅವರಿಗೆ ಮುತ್ತಿಡಲು ಬಂದು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ್ದ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಸಹಾಯದಿಂದ ಮಂಗಳಮುಖಿಯರು ಸಿಕ್ಕಿಬಿದ್ದಿದ್ದಾರೆ.
ನವೆಂಬರ್ 2ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದ ಮಾವಳ್ಳಿ-2ರ ಗುಮ್ಮನಕ್ಕಲ್ ಜಡೆಯನಮನೆಯ ಅರುಣಕುಮಾರ ಭಾಸ್ಕರ ನಾಯ್ಕ (32) ಅವರನ್ನು ಮಂಗಳಮುಖಿಯರು ಅಡ್ಡ ಹಾಕಿದ್ದರು. ಮಂಡ್ಯದ ಅದ್ನಾನ್ ಮಹದಿ, ಮೈಸೂರಿನ ಅಜರ್ ಖಾನ್, ಮಹ್ಮದ್ ಉಸ್ನಾನ, ತಮಿಳುನಾಡಿನ ಮದನ ಪಳನಿ ಸೇರಿ ಅವರನ್ನು ಸರಸಕ್ಕೆ ಕರೆದಿದ್ದರು. `ಹಣ ಇಲ್ಲ’ ಎಂದಾಗ `ನಿನಗೆ ಪ್ರೀ’ ಎಂಬ ಆಫರ್ ನೀಡಿದ್ದರು. ಅದಾದ ನಂತರ ಮೈ ಮುಟ್ಟುತ್ತ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದರು.
ಆ ನಾಲ್ಕು ಜನ ಮಂಗಳಮುಖಿಯರ ವಿರುದ್ಧ ಅರುಣಕುಮಾರ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು. ಜನ ನೀಡಿದ ಮಾಹಿತಿ ಹಾಗೂ ಸಿಸಿ ಕ್ಯಾಮರಾ ದೃಶ್ಯಾವಳಿ ಗಮನಿಸಿ ಪೊಲೀಸರು ಮಂಗಳಮುಖಿಯರನ್ನು ಹುಡುಕಿದರು. ಅಂದಾಜು 15 ಗ್ರಾಂ ತೂಕದ 1 ಲಕ್ಷ ರೂ ಮೌಲ್ಯದ ಚೈನ್ ಕಳ್ಳತನ ಮಾಡಿದವರನ್ನು ಮುರುಡೇಶ್ವರ ಪೊಲೀಸರು ಜೈಲಿಗೆ ಕಳುಹಿಸಿದರು.