ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದಾರೆ. ವಿಶ್ವೇಶ್ವರ ಹೆಬ್ಬಾರ್ ಅವರು ಆ ಕಳ್ಳರ ಹುಡುಕಾಟ ನಡೆಸಿದ್ದಾರೆ.
ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರು ವಾಸವಾಗಿದ್ದಾರೆ. ತಮ್ಮ ಭೂಮಿಯಲ್ಲಿ ಅವರು ಅಡಿಕೆ ಬೆಳೆದಿದ್ದಾರೆ. ಮೊದಲಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಫಸಲಿರುವ ಕಾರಣ ಅವರು ತಲೆಬಿಸಿಯಲ್ಲಿದ್ದು, ಸದ್ಯ ಕಳ್ಳರ ಕಾಟದಿಂದ ಅವರು ಸುಸ್ತಾಗಿದ್ದಾರೆ.
ನವೆಂಬರ್ 5ರಂದು ಅವರ ತೋಟಕ್ಕೆ ಕಳ್ಳರು ನುಗ್ಗಿದ್ದಾರೆ. ಅಡಿಕೆ ಮರ ಹತ್ತಿ ಫಸಲು ಕೊಯ್ದಿದ್ದಾರೆ. ಬೆಳಗ್ಗೆ 9ಗಂಟೆಯಿAದ ಸಂಜೆ 6 ಗಂಟೆ ಅವಧಿಯಲ್ಲಿ ತೋಟದ ಫಸಲು ಕೊಯ್ದರೂ ವಿಶ್ವೇಶ್ವರ ಹೆಬ್ಬಾರ್ ಅವರಿಗೆ ಕಳ್ಳರ ಆಗಮನದ ಸುಳಿವು ಸಿಕ್ಕಿಲ್ಲ. ಸುಮಾರು 40 ಮರಗಳನ್ನು ಬೋಳಿಸಿದ ಕಳ್ಳರು ಅಂದಾಜು 10 ಕ್ವಿಂಟಲ್ ಹಸಿ ಅಡಿಕೆ ಅಪಹರಿಸಿದ್ದಾರೆ.
ಕಳ್ಳರು ಎಲ್ಲಾ ಅಡಿಕೆಯನ್ನು ಅಲ್ಲಿಂದ ಸಾಗಿಸಿದ ನಂತರ ವಿಶ್ವೇಶ್ವರ ಹೆಬ್ಬಾರ್ ಅವರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಆದರೆ, ಆ ಕಳ್ಳರು ಯಾರು ಎಂದು ಅವರಿಗೆ ತಿಳಿಯಲಿಲ್ಲ. ಹೀಗಾಗಿ ಅವರು ಇದೀಗ ಪೊಲೀಸರ ಸಹಾಯಪಡೆದು ಕಳ್ಳರ ಹುಡುಕಾಟ ನಡೆಸಿದ್ದಾರೆ. `ಕಳ್ಳರ ಕಾಟದಿಂದ 1 ಲಕ್ಷ ರೂ ನಷ್ಟವಾಗಿದ್ದು, ಅವರನ್ನು ಪತ್ತೆ ಮಾಡಿಕೊಡಿ’ ಎಂದು ಪ್ರಕರಣ ದಾಖಲಿಸಿದ್ದಾರೆ.