ಹೈಸ್ಕೂಲ್ ವಿದ್ಯಾರ್ಥಿನಿಯರನ್ನು ಪುಸಲಾಯಿಸಿ ಅವರ ಮೊಬೈಲ್ ಸಂಖ್ಯೆಪಡೆಯುತ್ತಿದ್ದ ಶಿಕ್ಷಕ ಕಿರಣ ಟೊಪೊಜಿ ಅವರಿಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದ ಸಂಗತಿ ಹೊರಬಿದ್ದಿದೆ.
ಮುಂಡಗೋಡಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಡಸಾಲಿ ಗ್ರಾಮದ ಕಿರಣ ನಿಂಗಪ್ಪ ಟೊಪೊಜಿ ದೈಹಿಕ ಶಿಕ್ಷಕರಾಗಿದ್ದು, ಅಲ್ಲಿ ಅಪರಾತಪರಾ ನಡೆಸಿದ ಕಾರಣ ಸಂಸ್ಥೆಯವರು ಹೊರದಬ್ಬಿದ್ದರು. ಅದಾದ ನಂತರ ಕಿರಣ ಟಪೋಜಿ ಕರಗಿನಕೊಪ್ಪದ ಖಾಸಗಿ ಸಂಸ್ಥೆ ಬಾಗಿಲು ಬಡೆದಿದ್ದು ಆ ಶಿಕ್ಷಣ ಸಂಸ್ಥೆಯಲ್ಲಿಯೂ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು. ಈಚೆಗೆ ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕಾರಣ ಪೊಲೀಸರು ಕಿರಣ ಟಪೋಜಿ ಅವರನ್ನು ಬಂಧಿಸಿದ್ದರು.
ಅದಾದ ನಂತರ ಇನ್ನಷ್ಟು ಮಾಹಿತಿ ಬಹಿರಂಗವಾಗಿದೆ. ಅನೇಕ ಬಾಲಕಿಯರಿಗೆ ಕಿರಣ ಟಪೋಜಿ ಅಶ್ಲೀಲ ಮೆಸೆಜ್ ಮಾಡಿದ ಆರೋಪವ್ಯಕ್ತವಾಗಿದೆ. ಕೆಲ ವಿದ್ಯಾರ್ಥಿನಿಯರಿಗೆ ಪದೇ ಪದೇ ಫೋನ್ ಮಾಡಿಯೂ ಆ ಶಿಕ್ಷಕ ಕಾಡಿಸುತ್ತಿದ್ದ ವಿಚಾರ ಹೊರ ಬಿದ್ದಿದೆ. ಶಿಕ್ಷಕರೇ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆದ ವಿಚಾರ ಪಾಲಕರ ಆತಂಕಕ್ಕೆ ಕಾರಣವಾಗಿದೆ.