ಶಿರಸಿ ರಸ್ತೆಯಲ್ಲಿನ ಹೊಂಡಕ್ಕೆ ಸಿಲುಕಿ ಲಾರಿಯ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಹೊಂಡದಲ್ಲಿದ್ದ ಕಲ್ಲುಗಳು ರಿಕ್ಷಾವೊಂದರ ಗಾಜು ಒಡೆದಿದ್ದು, ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ
Advertisement. Scroll to continue reading.
ಶಿರಸಿಯ ಎಲ್ಲೆಂದರಲ್ಲಿ ರಸ್ತೆ ಮೇಲೆ ಹೊಂಡ ಬಿದ್ದಿದೆ. ಕೋಟೆಕರೆ ರಸ್ತೆಯಲ್ಲಿಯೂ ಭಾರೀ ಪ್ರಮಾಣದ ಹೊಂಡ ಬಿದ್ದಿದೆ. ಬುಧವಾರ ಟಿಪ್ಪರ್ ವಾಹನವೊಂದು ಆ ರಸ್ತೆ ಮಾರ್ಗವಾಗಿ ಸಂಚರಿಸಿದ್ದು, ಮಾರಿಗುಡಿ ಸರ್ಕಲ್ ಹೋಗುವ ಬದಿಯಲ್ಲಿ ಆ ಟಿಪ್ಪರಿನ ಹೊಂಡಕ್ಕೆ ಬಿದ್ದು ಪಂಚರ್ ಆಗಿದೆ. ಪಂಚರ್ ಆದ ರಭಸಕ್ಕೆ ಹೊಂಡದಲ್ಲಿದ್ದ ಕಲ್ಲುಗಳು ಚಲ್ಲಾಪಿಲ್ಲಿಯಾಗಿ ಹಾರಿವೆ.
ಆ ಕಲ್ಲುಗಳು ಸಮೀಪದ ರಿಕ್ಷಾವೊಂದಕ್ಕೆ ತಾಗಿದ್ದು, ರಿಕ್ಷಾದ ಮುಂದಿನ ಎರಡು ಲೈಟುಗಳು ಒಡೆದಿವೆ. ಇನ್ನೊಂದು ಕಲ್ಲು ವ್ಯಕ್ತಿಯೊಬ್ಬರ ಬೆನ್ನಿಗೆ ತಾಗಿ ಅವರಿಗೆ ಗಾಯವಾಗಿದೆ. ಟೈಯರ್ ಸ್ಪೋಟದ ಗಾಳಿಗೆ ರಸ್ತೆ ಮೇಲಿದ್ದ ಜಲ್ಲಿ ಕಲ್ಲುಗಳು ಸಹ ಎಲ್ಲೆಂದರಲ್ಲಿ ಹಾರಿದ್ದು, ಆ ವೇಳೆ ಜನ ಸಂಚಾರ ಇದ್ದರೂ ದೊಡ್ಡ ಅಪಾಯ ಸಂಭವಿಸಿಲ್ಲ. ರಸ್ತೆ ಅವ್ಯವಸ್ಥೆ ಖಂಡಿಸಿ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ.