ಅನಾರೋಗ್ಯಕ್ಕೆ ಒಳಗಾಗಿದ್ದ ಕುಮಟಾದ ಅಂಗವಿಕಲ ಗಣೇಶ ಹರಿಕಂತ್ರ ಅವರು ಅಗ್ನಿಗೆ ಆಹುತಿಯಾಗಿದ್ದಾರೆ. ಬೆಂಕಿ ಜ್ವಾಲೆಯಲ್ಲಿ ಉರಿಯುತ್ತಿದ್ದ ಅವರನ್ನು ರಕ್ಷಿಸುವ ಪ್ರಯತ್ನ ನಡೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಕುಮಟಾದ ಹಳಕಾರಿನ ಗಣೇಶ ಕೃಷ್ಣ ಹರಿಕಂತ್ರ ಅವರು ವಾಸವಾಗಿದ್ದರು. ಅಂಗವಿಕಲ್ಯದಿoದ ಅವರು ಬಳಲುತ್ತಿದ್ದರು. ಈ ನಡುವೆ ಗಣೇಶ ಹರಿಕಂತ್ರ ಅವರಿಗೆ ಅನಾರೋಗ್ಯ ಕಾಡಲು ಶುರುವಾಯಿತು. ಕಳೆದ ಒಂದು ವರ್ಷದಿಂದ ಅವರು ವಿವಿಧ ಆಸ್ಪತ್ರೆ ಓಡಾಟ ನಡೆಸಿದರು. ಆದರೆ, ಅವರ ಆರೋಗ್ಯ ಸರಿ ಆಗಲಿಲ್ಲ.
ಮಾನಸಿಕವಾಗಿಯೂ ನೋವು ಅನುಭವಿಸಿದ ಗಣೇಶ ಹರಿಕಂತ್ರ ಅವರು ಜನವರಿ 31ರಂದು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡರು. ಅದಾದ ನಂತರ ಬೆಂಕಿ ಹಚ್ಚಿಕೊಂಡರು. ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾದ ನಂತರ ಕಾರವಾರ ಆಸ್ಪತ್ರೆಗೂ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಆದರೆ, ಸುಟ್ಟು ಹೋಗಿದ್ದ ಗಣೇಶ ಹರಿಕಂತ್ರ ಅವರು ರಾತ್ರಿ ಸಾವನಪ್ಪಿದರು. ಹಳಕಾರದ ಕೃಷ್ಣ ಘಟಬೀರ ಹರಿಕಂತ್ರ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದರು.