ಮುಂಡಗೋಡದ ತೆಗ್ಗಿನಕೊಪ್ಪದಲ್ಲಿ ಹೊಸದಾಗಿ ನಿರ್ಮಿಸಿದ ಸಿಮೆಂಟ್ ರಸ್ತೆ ಮೇಲೆ ವಿನೋದ ರಾಠೋಡ್ ಅವರು ಬೈಕ್ ಓಡಿಸಿ ರಂಪಾಟ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ವಿನೋದ ರಾಠೋಡ್ ಬೆದರಿಕೆ ಒಡ್ಡಿದ್ದಾರೆ.
ತೆಗ್ಗಿನಕೊಪ್ಪ ಗ್ರಾಮದಿಂದ ಲಾಮಾ ಕ್ಯಾಂಪ್ ನಂ-01ರವರೆಗೆ ಹೊಸದಾಗಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ಗಟ್ಟಿಯಾಗಲಿ ಎಂಬ ಉದ್ದೇಶಕ್ಕೆ ಅಲ್ಲಿ ವಾಹನ ಓಡಾಟಕ್ಕೆ ತಡೆ ಒಡ್ಡಲಾಗಿತ್ತು. ತೆಗ್ಗಿನಕೊಪ್ಪ ಗ್ರಾಮದ ನಿವಾಸಿ ಅನಿಲಕುಮಾರ್ ರಾಠೋಡ್ ಅವರು ಲಂಬಾಣಿ ಅಭಿವೃದ್ಧಿ ನಿಗಮದಿಂದ ಈ ರಸ್ತೆ ಕೆಲಸ ಮಾಡಿದ್ದರು. ಫೆಬ್ರವರಿ 9ರಂದು ಕಾಮಗಾರಿ ನಡೆದಿದ್ದು, ರಸ್ತೆ ಶುರುವಿನಲ್ಲಿ ಟಾಕ್ಟರ್ ನಿಲ್ಲಿಸಿ ರಸ್ತೆ ಓಡಾಟಕ್ಕೆ ತಡೆ ಒಡ್ಡಲಾಗಿತ್ತು.
ಆದರೆ, ಅದೇ ಗ್ರಾಮದ ವಿನೋದ ರಾಠೋಟ್ ಅವರು ಉದ್ದೇಶಪೂರ್ವಕವಾಗಿ ಹಸಿ ಕಾಂಕ್ರೀಟ್ ರಸ್ತೆಯ ಮೇಲೆ ಬೈಕ್ ಓಡಿಸಿದರು. ಆ ಮೂಲಕ ಆ ರಸ್ತೆಯನ್ನು ಹಾಳು ಮಾಡಿದರು. ನಂತರ `ರಸ್ತೆ ಕೆಲಸ ಕಳಪೆಯಾಗಿದೆ’ ಎಂದು ಆರೋಪಿಸಿ ಗುತ್ತಿಗೆದಾರರಿಗೆ ನಿಂದಿಸಿದರು. ಈ ಬಗ್ಗೆ ಬುಧವಾರ ಗುತ್ತಿಗೆದಾರ ಅನಿಲಕುಮಾರ್ ಪೊಲೀಸ್ ದೂರು ನೀಡಿದ್ದಾರೆ.