ಪ್ರತಿ ವರ್ಷದ ಹಾಗೇ ಈ ವರ್ಷವೂ ಯಲ್ಲಾಪುರದ `ರಂಗ ಸಹ್ಯಾದ್ರಿ’ ಬಳಗದವರು ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಿದ್ದಾರೆ. ಏಪ್ರಿಲ್ 11ರಿಂದ ಮೇ 3ರವರೆಗೆ ಈ ಶಿಬಿರ ನಡೆಯಲಿದೆ.
`ಕಳೆದ 20 ವರ್ಷಗಳಿಂದ ಈ ಶಿಬಿರ ಆಯೋಜಿಸಲಾಗುತ್ತಿದೆ. ಈ ಬಾರಿಯೂ ಯಲ್ಲಾಪುರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಬಿರ ನಡೆಯಲಿದೆ’ ಎಂದು ರಂಗ ಸಹ್ಯಾದ್ರಿಯ ಅಧ್ಯಕ್ಷ ಡಿ ಎನ್ ಗಾಂವ್ಕರ್ ಅವರು ಮಾಹಿತಿ ನೀಡಿದರು. ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 5ಗಂಟೆಯವರೆಗೆ ಶಿಬಿರ ನಡೆಯಲಿದೆ. ಮಕ್ಕಳ ರಜಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ’ ಎಂದವರು ತಿಳಿಸಿದರು.
`ಈ ಶಿಬಿರದಲ್ಲಿ ವಿವಿಧ ತಜ್ಞರಿಂದ ತರಗತಿ ನಡೆಯಲಿದೆ. ಭಗವದ್ಗೀತೆ ಶ್ಲೋಕ ಪಠಣ, ಯೋಗ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಕರಾಟೆ, ಮರಕಾಲು ನಡಿಗೆ, ಅರ್ಟ, ಕ್ರಾಪ್ಸ್, ರಿಂಗ್
ಡಾನ್ಸ್, ಬಾಲ್ ಜಗಲಿಂಗ್, ರೂಬಿಸ್ ಕ್ಯೂಬ್, ಕಂಪ್ಯೂಟರ್ ಕುರಿತು ಪ್ರಾಥಮಿಕ ಮಾಹಿತಿ ನೀಡಲಾಗುತ್ತದೆ. ಮಹಾಭಾರತ ಹಾಗೂ ರಾಮಾಯಣ ಕಥೆಗಳ ಮೂಲಕ ನೈತಿಕ ಮೌಲ್ಯಗಳ ಪಾಠ ಮಾಡಲಾಗುತ್ತದೆ. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆಯಿರಲಿದ್ದು, ಮನರಂಜನೆ ಮತ್ತು ಕಲಿಕೆ ಎರಡೂ ಏಕಕಾಲದಲ್ಲಿ ಸಿಗುವಂತೆ ವಿನ್ಯಾಸ ಮಾಡಲಾಗಿದೆ’ ಎಂದವರು ವಿವರಿಸಿದರು ಸುಮಂಗಲಾ ಜೋಶಿ, ಪಾರ್ವತಿ ಕಟ್ಟಿಮನಿ, ಲಕ್ಷ್ಮೀ ಶಂಕರ ಹೆಗಡೆ, ಪರಮೇಶ್ವರ ನಾಯ್ಕ, ಸೋನು ಭಟ್ಟ ಇದ್ದರು.