ಸರ್ಕಾರಿ ಕಚೇರಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಮಾತನಾಡಿದ ಶಿರಸಿಯ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ನವೀನ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸಿಗರು ಕಿಡಿಕಾರಿದ್ದಾರೆ. ನವೀನ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.
ಶಿರಸಿಯ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಸದಸ್ಯರು ಸರ್ಕಾರಿ ಕಟ್ಟಡವನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಶಿರಸಿಯ ಸರ್ಕಾರಿ ಕಚೇರಿ ದುರುಪಯೋಗವಾದ ಬಗ್ಗೆ ಕಾಂಗ್ರೆಸಿಗರು ಆಕ್ಷೇಪಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಿರಸಿ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ನವೀನ್ ಶೆಟ್ಟಿ ಅವರು ಗುರುವಾರ ತಾಲೂಕು ಪಂಚಾಯತ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಆಡಳಿತ ವೈಪಲ್ಯದ ಬಗ್ಗೆ ಅವರು ಮಾಧ್ಯಮದ ಎದುರು ಮಾತನಾಡಿದ್ದರು. ಸರ್ಕಾರವನ್ನು ಟೀಕಿಸುವುದಕ್ಕಾಗಿ ಸರ್ಕಾರಿ ಕಚೇರಿಯನ್ನು ಬಳಕೆ ಮಾಡಿದಕ್ಕಾಗಿ ಕಾಂಗ್ರೆಸಿಗರು ಅಸಮಧಾನವ್ಯಕ್ತಪಡಿಸಿದರು.
ತಾಲೂಕ ಪಂಚಾಯತ್ ಎದುರು ಜಮಾಯಿಸಿದ ಎಸ್ ಕೆ ಭಾಗ್ವತ, ಜಗದೀಶ ಗೌಡ, ರಾಘು ಕಾನಡೆ, ಜೋಪಿ ಪೀಟರ್, ಪ್ರಸನ್ನ ಶೆಟ್ಟಿ ಮೊದಲಾದವರು ತಮ್ಮ ಸಹಚರರ ಜೊತೆ ಧರಣಿಗೆ ಕುಳಿತರು. `ತಾಲೂಕು ಪಂಚಾಯತ್ ಸಭಾ ಭವನ ಸರಕಾರಕ್ಕೆ ಸೇರಿದೆ. ಅಲ್ಲಿ ರಾಜಕೀಯಪ್ರೇರಿತ ಟೀಕೆಗಳಿಗೆ ಅವಕಾಶ ನೀಡುವುದು ಸರಿಯಲ್ಲ’ ಎಂದು ಅವರು ಅಧಿಕಾರಿಗಳಿಗೂ ತಿಳಿಸಿದರು. ಕ್ರಮ ಆಗುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.