ಗಂಟಲು ಕಾನ್ಸರಿನಿಂದ ಸಮಸ್ಯೆ ಅನುಭವಿಸಿದ್ದ ಶಿರಸಿಯ ಗಿರಿಜಾ ನಾಯ್ಕ ಅವರು ಅರಣ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಬಾಳೆಗದ್ದೆ ಬಳಿಯ ಮದ್ಯ ಇಡ್ತಳ್ಳಿಯಲ್ಲಿ ಗಿರಿಜಾ ಈಶ್ವರ ನಾಯ್ಕ (65) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರಿಗೆ ಐದು ವರ್ಷದ ಹಿಂದೆ ಅನಾರೋಗ್ಯ ಕಾಡಿತು. ತಪಾಸಣೆ ನಡೆಸಿದಾಗ ಗಂಟಲು ಕಾನ್ಸರ್ ಕಾಡುತ್ತಿರುವುದು ಗೊತ್ತಾಯಿತು. 2023ರಲ್ಲಿ ಅವರು ಶಸ್ತç ಚಿಕಿತ್ಸೆಗೂ ಒಳಗಾದರು. ಆದರೆ, ಅವರ ಆರೋಗ್ಯ ಸುಧಾರಿಸಲಿಲ್ಲ.
ತಮ್ಮ ಆರೋಗ್ಯದ ಬಗ್ಗೆ ಗಿರಿಜಾ ನಾಯ್ಕ ಅವರು ಚಿಂತೆಗೆ ಒಳಗಾದರು. ಅನಾರೋಗ್ಯದ ಕಾರಣ ಮಾನಸಿಕ ವೇದನೆ ಅನುಭವಿಸಿದರು. ಅನಾರೋಗ್ಯಕ್ಕೆ ಒಳಗಾಗಿ ಜೀವಿಸುವುದಕ್ಕಿಂತಲೂ ಸಾವನಪ್ಪುವುದೇ ಉತ್ತಮ ಎಂದು ಅವರು ಭಾವಿಸಿದರು. ಹೀಗಾಗಿ ಮಾರ್ಚ 21ರಂದು ಹಿತ್ಲಜಡ್ಡಿ ಅರಣ್ಯ ಪ್ರದೇಶಕ್ಕೆ ಹೋದ ಅವರು ಅಲ್ಲಿದ್ದ ಕುಬ್ಸಲು ಬಳ್ಳಿಗೆ ವೇಲು ಕಟ್ಟಿದರು. ಅಲ್ಲಿಯೇ ನೇಣು ಹಾಕಿಕೊಂಡು ಸಾವನಪ್ಪಿದರು. ಮರಾಠಿಕೊಪ್ಪದ ಜೋಡಕಟ್ಟೆ ಬಳಿ ನರ್ಸ ಕೆಲಸ ಮಾಡುವ ಶಶಿಕಲಾ ನಾಗರಾಜ ಭಂಡಾರಿ ಅವರು ತಾಯಿ ಸಾವಿನ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕಾನೂನು ಕ್ರಮ ಜರುಗಿಸಿದರು.
`ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ’