ಸರಾಯಿ ಕೊಡಿಸದ ಕಾರಣ ಸ್ನೇಹಿತನಿಗೆ ಹೊಡೆದು ಪರಾರಿಯಾಗಿದ್ದ ಶಿರಸಿ ಇಂದಿರಾ ನಗರದ ಸಾಯಿಬ್ ಅಹಮದ್ ಅವರು ಎರಡು ವರ್ಷದ ನಂತರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರನ್ನು ಕಂಡ ತಕ್ಷಣ ತಪ್ಪಿಸಿಕೊಳ್ಳುತ್ತಿದ್ದ ಸಾಹಿಬ್ ಅಹಮದ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶಿರಸಿ ಬಾಪೂಜಿ ನಗರ ಬಳಿಯ ರಾಮನಬೈಲಿನ ವಿಜಯಕುಮಾರ ಗಣೇಶ ಮೇಸ್ತಾ ಅವರು ವಾಸವಾಗಿದ್ದು, ಅವರು ಚಾಲಕರಾಗಿದ್ದರು. ೨೦೨೩ರ ಅಗಸ್ಟ ೧೩ರಂದು ಅವರು ಶಿರಸಿಯ ಟೆಂಪೋ ನಿಲ್ದಾಣದ ಬಳಿ ನಿಂತಿದ್ದರು. ಅಲ್ಲಿರುವ ವಿಶ್ವ ವೈನ್ ಶಾಪಿಗೆ ಹೋಗಿ ಗಣೇಶ ಮೇಸ್ತ ಅವರು ಸರಾಯಿ ಕುಡಿದಿದ್ದು, ಈ ವೇಳೆ ಅಲ್ಲಿ ಇಂದಿರಾ ನಗರದ ಸಾಯಿಬ್ ಅಹಮದ್ ಅಬ್ದುಲ್ ಖಾದರ್ ಅವರು ಆಗಮಿಸಿದರು. ಸಾಯಿಬ್ ಅಹಮದ್ ಅವರು `ತನಗೂ ಸರಾಯಿ ಕೊಡಿಸು’ ಎಂದು ವಿಜಯಕುಮಾರ ಮೇಸ್ತಾ ಅವರ ಬಳಿ ಕೇಳಿದರು. ಆಗ, `ನನ್ನಲ್ಲಿ ಕಾಸಿಲ್ಲ’ ಎಂದರು.
ಇದರಿAದ ಸಿಟ್ಟಾದ ಸಾಯಿಬ್ ಅಹಮದ್ ಅವರು ವಿಜಯಕುಮಾರ ಮೇಸ್ತ ಅವರಿಗೆ ಕೆಟ್ಟದಾಗಿ ನಿಂದಿಸಿದರು. ಅದಾದ ನಂತರ ಹರಿತವಾದ ಬ್ಲೇಡಿನಿಂದ ಅವರಿಗೆ ಹೊಡೆದರು. ಜನ ಬರುವುದನ್ನು ನೋಡಿ ಓಡಿ ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಸಾಯಿಬ್ ಅಹಮದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಜಾಮೀನಿನ ಮೇಲೆ ಹೊರ ಬಂದಿದ್ದ ಸಾಯಿಬ್ ಮಹಮದ್ ನಂತರ ನ್ಯಾಯಾಲಯಕ್ಕೆ ಹೋಗಿರಲಿಲ್ಲ.
ಈ ಹಿನ್ನಲೆ ಶಿರಸಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ಎರಡು ವರ್ಷದಿಂದ ತಲೆಮರೆಸಿಕೊಂಡಿದ್ದ ಸಾಯಿಬ್ ಅಹಮದ್ ಅವರನ್ನು ಶಿರಸಿ ನಗರ ಠಾಣೆ ಪಿಸೈ ನರಸಿಂಹಲು, ಪೊಲೀಸ್ ಸಿಬ್ಬಂದಿ ಈರಣ್ಣ ಹಕ್ಕಿಗುಂಡಿಮಠ, ನಜೀರ್ ಸಾಬ್ ಪಿಂಜಾರ್ ಸೇರಿ ಬಂಧಿಸಿದರು.