`ಸೌರಶಕ್ತಿಯ ಬಳಕೆಯಿಂದ ಮಾತ್ರ ಇಂಧನದ ಮೇಲಿನ ಒತ್ತಡ ತಡೆಯಲು ಸಾಧ್ಯ’ ಎಂದು ಗೋಕಲ್ದಾಸ್ ಎಕ್ಸಪೋರ್ಟ್ ಫೌಂಡೇಶನ್ನ ಸಿಎಸ್ಆರ್ ಮುಖ್ಯಸ್ಥ ರಾಜೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.
ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಸರ್ಕಾರಿ ಸಹಭಾಗಿತ್ವದಲ್ಲಿ ಸ್ಕೋಡ್ವೆಸ್ ಸಹಯೋಗದ ನಿರ್ವಹಣೆಯಲ್ಲಿರುವ ಶಿರಸಿಯ ಶಕ್ತಿ ಸದನಕ್ಕೆ ಸೋಲಾರ್ ವಾಟರ್ ಹೀಟರ್ ವಿತರಿಸಿ ಮಾತನಾಡಿದ ಅವರು `ಮುಂದಿನ ಪೀಳಿಗೆಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಇಂಧನಗಳು ಮುಖ್ಯ ಮಾತ್ರ ನಿಭಾಯಿಸುತ್ತಿದೆ. ಜಾಗತಿಕ ಇಂಧನ ಉದ್ಯಮದಲ್ಲಾಗುತ್ತಿರುವ ತಲ್ಲಣಗಳು ನವೀಕರಿಸಬಹುದಾದ ಇಂಧನ ಬಳಕೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಿವೆ. ಮುಂದಿನ ಪೀಳಿಗೆಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಇಂಧನಗಳೂ ಸಹ ಬಹುಮುಖ್ಯ ಪಾತ್ರವಹಿಸುವುದರಿಂದ ನೈಸರ್ಗಿಕ ಹಾಗೂ ನವೀಕರಿಸಬಹುದಾದ ಇಂಧನದ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಹೆಚ್ಚಿನ ಗಮನವಹಿಸುವುದು ಸೂಕ್ತ’ ಎಂದವರು ಹೇಳಿದ್ದಾರೆ.
ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು `ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಗ್ರಾಮಗಳ ಅರಣ್ಯ ಅವಲಂಬಿತ ಕುಟುಂಬಗಳ ಉರುವಲು ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೋಲಾರ್ ಹಾಗೂ ಜೈವಿಕ ಇಂಧನ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು. ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ, ಯೋಜನಾ ವಿಭಾಗದ ಮುಖ್ಯಸ್ಥ ವಿರೇಂದ್ರ ಸಿ ಅವರು ಸೋಲಾರ್ ಉಪಕರಣ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದರು.