ಕಾರವಾರದ ಕಿನ್ನರ ಹೈಸ್ಕೂಲಿನ ಎಲ್ಲಾ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶೇ 100ರಷ್ಟು ಫಲಿತಾಂಶ ದಾಖಲಾದ ಕಾರಣ ಶಾಲಾ ಸಮಿತಿಯವರು ಸಂತಸವ್ಯಕ್ತಪಡಿಸಿದ್ದಾರೆ.
`ಶಿಕ್ಷಕರ ನಿರಂತರ ಪ್ರಯತ್ನ, ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಪೊಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಮುಖ್ಯಾಧ್ಯಾಪಕ ಸಂದೀಪ ರಾಣೆ ಅವರು ಹೇಳಿದ್ದಾರೆ. ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಶುಭಕೋರಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣ ಹೋಬಳಿಯ ಗಂಗೆಕೊಳ್ಳದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100ರ ಸಾಧನೆ ಮಾಡಿದೆ. ಸತತ ಐದು ವರ್ಷಗಳಿಂದ ಈ ಶಾಲೆ ಶೇ 100ರ ಸಾಧನೆ ಮಾಡುತ್ತಿದೆ. ಪರೀಕ್ಷೆಯಲ್ಲಿ 35 ವಿದ್ಯಾರ್ಥಿನಿಯರಲ್ಲಿ 19 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ, 15 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿರೋಶಿ 96.80% ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ನಮಿತಾ ರಮೇಶ ಗೌಡ 93.28% ದ್ವಿತೀಯ ಸ್ಥಾನ, ಅಂಬಿಕಾ ಪ್ರದೀಪ ನಾಯಕ 92.48% ತೃತಿಯ ಸ್ಥಾನ, ನೇಹಾ ರಮೇಶ ನಾಯ್ಕ, 92.0% ಚತುರ್ಥ ಸ್ಥಾನ, ಭವಾನಿ ವಿನಾಯಕ ಬೆಂಡ್ಲಗಟ್ಟಿ, 91.84% ಅಂಕಗಳನ್ನು ಪಡೆದು ಐದನೇ ಸ್ಥಾನಪಡೆದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ ವೈ ಕೆ ಹಾಗೂ ವಸತಿ ಶಾಲೆಯ ಪ್ರಾಂಶುಪಾಲ ಎನ್ ಆರ್ ನಾಯಕ ಅವರು ಮಾಹಿತಿ ನೀಡಿದ್ದಾರೆ.
ಅಂಕೋಲಾ ತಾಲೂಕಿನ ಬೆಳಸೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇ 100ರಷ್ಟು ಸಾಧನೆ ಮಾಡಿದ್ದಾರೆ. ಇಲ್ಲಿ ಪರೀಕ್ಷೆಯಲ್ಲಿ ಹಾಜರಾದ 30 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಶಾಲೆಯ ಗುಣಾತ್ಮಕ ಶ್ರೇಣಿ 86.22% ಪಡೆದುಕೊಂಡಿದೆ. ಸೃಷ್ಟಿ ನವೀನ ಗೌಡ (92.8%) ಪ್ರಥಮ, ಅನೇಶ ಸಾಯಿನಾಥ ಕಾಂಬ್ಳೆ (91.2%) ದ್ವಿತೀಯ, ಶ್ರೀರಾಮ ಬಿರಣ್ಣ ನಾಯಕ (90.72%) ತೃತೀಯ, ದಿವ್ಯಾ ಪರಶುರಾಮ ಪೊಪಳೆ 90.2% ಟಾಪ್ 4 ಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಸಮನ್ವಯಾಧಿಕಾರಿ ರಾಜು ಗಾಂವಕರ, ಶಾಲೆಯ ಪ್ರಾಂಶುಪಾಲ ವಿನೋದ ಗಾಂವಕರ ಅವರು ಮಾಹಿತಿ ನೀಡಿದ್ದಾರೆ.