ಸಿದ್ದಾಪುರ ಹೆರೂರಿನ ಅಬ್ದುಲ್ ಖುದ್ದುಸ್ ಅವರು ಕೂಲಿ ಕೆಲಸ ಬಿಟ್ಟು ಕಳ್ಳತನಕ್ಕೆ ಕೈ ಹಾಕಿದ್ದಾರೆ. ಶಿರಸಿಯ ಟೀಚರ್ ಕಾಲೋನಿಯಲ್ಲಿದ್ದ ಶಹತಾಜ್ ಸಾಹೇಬ್ ಅವರ ಮನೆಯಲ್ಲಿ ಅವರು 1 ಲಕ್ಷ ರೂ ಹಣ ಕದ್ದಿದ್ದಾರೆ.
ಏಪ್ರಿಲ್ 18ರಂದು ಶಿರಸಿಯ ಶಹತಾಜ್ ತಂಬ್ರೇಜ್ ಸಾಬ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ 1 ಲಕ್ಷ ರೂ ಹಣದ ಜೊತೆ 1.30 ಲಕ್ಷ ರೂ ಮೌಲ್ಯದ ಬಂಗಾರದ ಉಂಗುರಗಳು ಕಾಣೆಯಾಗಿದ್ದವು. ಏಪ್ರಿಲ್ 19ರಂದು ಈ ವಿಷಯ ಗಮನಕ್ಕೆ ಬಂದಿದ್ದು, ಶಹತಾಜ್ ಸಾಬ್ ಅವರು ಪೊಲೀಸ್ ದೂರು ನೀಡಿದ್ದರು. ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಶೋಧ ಶುರು ಮಾಡಿದ್ದರು.
ಸಿದ್ದಾಪುರದ ಹೆರೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಖುದ್ದುಸ್ ಕಳ್ಳತನದ ದುಡ್ಡಿನಲ್ಲಿ ಹಾಯಾಗಿದ್ದರು. 1 ಲಕ್ಷ ರೂಪಾಯಿ ಹಣ ಕದ್ದ ಅವರು ಒಂದೇ ವಾರದಲ್ಲಿ 90 ಸಾವಿರ ರೂ ಹಣವನ್ನು ಅವರು ಖಾಲಿ ಮಾಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಅಬ್ದುಲ್ ಖುದ್ದುಸ್ ಸಿಕ್ಕಿಬಿದ್ದಿದ್ದು, ಈ ವೇಳೆ ಅವರ ಬಳಿಯಿದ್ದ 10ಸಾವಿರ ರೂ ಹಣವನ್ನು ಪೊಲೀಸರು ಜಪ್ತು ಮಾಡಿದರು. ಜೊತೆಗೆ ತಹತಾಜ್ ಅವರ ಮನೆಯಲ್ಲಿ ಕದ್ದಿದ್ದ ಬಂಗಾರದ ಉಂಗುರವನ್ನು ವಶಕ್ಕೆಪಡೆದರು. ಕಳ್ಳತನಕ್ಕೆ ಸಹಕರಿಸಿದ್ದ ಸ್ಕಾನರ್ ಹಾಗೂ ಮೊಬೈಲನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು. ಕಳ್ಳನನ್ನು ಸಹ ಹಿಡಿದು ಜೈಲಿಗೆ ಕಳುಹಿಸಿದರು.
ಪಿಸೈ ಬಸವರಾಜ ಕನಶೆಟ್ಟಿ ಅವರ ಜೊತೆ ಎಸೈ ಮಂಗಳಮೂರ್ತಿ ಶಿರಹಟ್ಟಿ, ಪೊಲೀಸ್ ಸಿಬ್ಬಂದಿ ಸಂತೋಷ ಆರ್ ಕೆ, ಸಂದೀಪ ನಿಂಬಾಯಿ, ರಾಕೇಶ ಎಚ್ ಎನ್, ಅರುಣ ಲಮಾಣಿ, ಮಂಜುನಾಥ ಕೆ, ಪ್ರಸಾದ ಎಂ, ಹನುಮಂತ ವಾಲೀಕರ್ ಈ ಕಾರ್ಯಾಚರಣೆ ರೂವಾರಿಯಾಗಿದ್ದರು. ಟೆಕ್ನಿಕಲ್ ವಿಭಾಗದ ಉದಯ ಗುನಗಾ ಹಾಗೂ ಬಬನ್ ಕದಂ ಸಹ ನೆರವು ನೀಡಿದರು.