ಕುಮಟಾದ ಮೂರೂರಿನಲ್ಲಿ ಲಕ್ಷಾಂತರ ರೂ ವೆಚ್ಚ ಮಾಡಿ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಆದರೆ, ಆ ಘಟಕ ಒಂದು ದಿನವೂ ನೀರು ಪೂರೈಸಿಲ್ಲ. ಹೀಗಿದ್ದರೂ, ಇದೀಗ ಆ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯತವೇ ಒಡೆದು ಧ್ವಂಸ ಮಾಡಿದೆ!
ದಶಕದ ಹಿಂದೆಯೇ 1ರೂಪಾಯಿ ನಾಣ್ಯ ಹಾಕಿ ಶುದ್ದ ಕುಡಿಯುವ ನೀರು ಪಡೆಯುವ ಘಟಕವನ್ನು ರಾಜ್ಯದ ಎಲ್ಲಡೆ ಶುರುವಾಡಲಾಗಿದೆ. ಅದರ ಪ್ರಕಾರ, ಕುಮಟಾದ ಮೂರೂರಿನಲ್ಲಿ ಸಹ ಈ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿದ್ದು, ಒಂದು ಹನಿ ನೀರನ್ನು ಈ ಘಟಕ ಜನರಿಗೆ ನೀಡಿಲ್ಲ. ಮೂರುರು ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದ ಪಕ್ಕ ಈ ಘಟಕ ಸ್ಥಾಪಿಸಿದ್ದು, ಘಟಕದ ಉದ್ಘಾಟನೆಗೂ ಮುನ್ನವೇ ಅದನ್ನು ನಾಶ ಮಾಡಲಾಗಿದೆ.
ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಿದ ಘಟಕವನ್ನು ಉದ್ಘಾಟಿಸದೇ ಇರಲು ಕಾರಣವೇನು? ಅದನ್ನು ಇದೀಗ ಧ್ವಂಸ ಮಾಡಿದ ಉದ್ದೇಶವೇನು? ಎಂದು ಯಾರಿಗೂ ಗೊತ್ತಿಲ್ಲ. ಶುದ್ಧ ನೀರು ಕೊಡಬೇಕಾದ ಘಟಕವೇ ಇದೀಗ ಅಶುದ್ಧವಾಗಿದ್ದು, ಗ್ರಾಮ ಪಂಚಾಯತ ವಿರುದ್ಧ ಜನಾಕ್ರೋಶವ್ಯಕ್ತವಾಗಿದೆ. `ಸದ್ಯ ಕುಡಿಯುವ ನೀರಿನ ಘಟಕವಿರುವ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಗ್ರಾಮ ಪಂಚಾಯತ ಆಸಕ್ತಿವಹಿಸಿದ ಮಾಹಿತಿಯಿದ್ದು, ಬೆಲೆ ಬಾಳುವ ಉಪಕರಣಗಳನ್ನು ಹಾಳು ಮಾಡಿದ್ದು ಸರಿಯಲ್ಲ’ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಜಿ ಐ ಹೆಗಡೆ ಅವರು ಹೇಳಿದ್ದಾರೆ.
`ವಾಸ್ತು ದೋಷದ ಕಾರಣ ಅಲ್ಲಿರುವ ನೀರಿನ ಘಟಕ ಹಾಳು ಮಾಡಿದ್ದಾರೆ’ ಎಂದು ಸಹ ಜನ ದೂರಿದ್ದಾರೆ. `ಸರ್ಕಾರದ ಯೋಜನೆಗಳು ಜನ ಪರವಾಗಿರಬೇಕು. ಲಭ್ಯ ಸಂಪನ್ಮೂಲಗಳು ಉಪಯೋಗ ಬರುವ ರೀತಿ ಅಧಿಕಾರಿಗಳು ವರ್ತಿಸಬೇಕು. ಅದನ್ನು ಬಿಟ್ಟು ಉದ್ಘಾಟನೆಗೂ ಮುನ್ನವೇ ಶುದ್ಧ ನೀರಿನ ಘಟಕವನ್ನು ಧ್ವಂಸ ಮಾಡುವುದು ಸರಿಯಲ್ಲ’ ಎಂದು ಜಿ ಐ ಹೆಗಡೆ ಅವರು ಆಕ್ಷೇಪವ್ಯಕ್ತಪಡಿಸಿದ್ದಾರೆ.