ಹೊಟ್ಟೆಪಾಡಿಗಾಗಿ ಚಿಪ್ಪಿಕಲ್ಲು ಆರಿಸುವು ಕಸುಬು ಆರಿಸಿಕೊಂಡಿದ್ದ 11 ಜನ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆ ಕುಟುಂಬದ 24 ಮಕ್ಕಳು ಇದೀಗ ಅನಾಥರಾಗಿದ್ದಾರೆ. ದುಡಿಯುವ ವಯಸ್ಸಿನ ಮಕ್ಕಳನ್ನು ಕಳೆದುಕೊಂಡ 10ಕ್ಕೂ ಅಧಿಕ ಹಿರಿಯ ಜೀವಗಳು ಆಧಾರವಿಲ್ಲದೇ ಅತಂತ್ರವಾಗಿವೆ.
ಭಟ್ಕಳದಲ್ಲಿಯೇ ಹುಟ್ಟಿ ಸಮುದ್ರ ಸೇರುವ ಸಣ್ಣ ನದಿ ಪಳ್ಳಿಹೊಳೆ ಎಂಬ ಹೆಸರುಪಡೆದಿದೆ. ವೆಂಕಟಾಪುರ, ತಟ್ಟಿಹಕ್ಕಲ ಹೊಳೆ ಎಂದೂ ಈ ನದಿ ಕರೆಯಿಸಿಕೊಳ್ಳುತ್ತದೆ. ಅಳ್ವೆಕೋಡಿ ಸಮೀಪ ಹೊಳೆ ಸಮುದ್ರ ಸೇರುತ್ತದೆ. ಸಮುದ್ರದ ಉಬ್ಬರರ ಇಳಿತದ ಸಮಯದಲ್ಲಿ ಈ ಹೊಳೆಯ ನೀರಿನ ಪ್ರಮಾಣದ ಏರಿಳಿತ ಸಾಮಾನ್ಯ. ಆ ಹೊಳೆಯಲ್ಲಿ ಚಿಪ್ಪಿಕಲ್ಲು ಆರಿಸಿ ಅದನ್ನು ಮಾರಾಟ ಮಾಡಿ ಬದುಕುವ ಕುಟುಂಬಗಳು ನೂರಾರು. ಅದರಂತೆ, ಕಳೆದ ಭಾನುವಾರ 14 ಜನ ಚಿಪ್ಪಿಕಲ್ಲು ಹೆಕ್ಕಲು ನದಿಗೆ ಇಳಿದಿದ್ದು, ಏಕಾಏಕಿ ಬಂದ ಅಲೆಯೊಂದು ಅವರ ಬದುಕನ್ನು ಕಿತ್ತುಕೊಂಡಿತು. 14 ಜನರಲ್ಲಿ 11 ಜನ ಅಲ್ಲಿಯೇ ಜಲಸಮಾಧಿಯಾದರು.
ಭಟ್ಕಳದ ಸಾರದಹೊಳೆ ಬಳಿಯ ಪಡುಶಿರಾಲಿಯ ಲಕ್ಷಿö್ಮÃ ನಾಯ್ಕರ ಕುಟುಂಬ ಚಿಪ್ಪಿಕಲ್ಲು ಸಂಗ್ರಹಿಸುವುದನ್ನೇ ಬದುಕಾಗಿಸಿಕೊಂಡಿದ್ದರು. ಬದುಕು ಕಟ್ಟಿಕೊಳ್ಳುವುದಕ್ಕಾಗಿ ನೀರಿಗೆ ಇಳಿದಾಗ ಅಪ್ಪಳಿಸಿದ ಅಲೆಯೊಂದು ಇಡೀ ಕುಟುಂಬವನ್ನು ಬೀದಿಗೆ ತಂದಿತು. ಒಂದೇ ಕುಟುಂಬದ 8 ಜನ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಮರುದಿನವೇ ಮತ್ತೆ ಮೂವರ ಶವ ಸಿಕ್ಕಿದೆ. ಈ ದುರಂತದ ಪರಿಣಾಮ ಒಟ್ಟು 24 ಮಕ್ಕಳು ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪಳ್ಳಿ ಹೊಳೆಗೆ ಹೋಗಿ ಚಿಪ್ಪಿಕಲ್ಲು ಸಂಗ್ರಹಿಸುವುದು ಈ ಕುಟುಂಬದವರಿಗೆ ಹೊಸದಾಗಿರಲಿಲ್ಲ. ಆದರೆ, ಆ ದಿನ ಅಂಥ ರಕ್ಕಸ ಅಲೆ ಬರುತ್ತದೆ ಎಂದು ಯಾರೂ ಊಹಿಸುತ್ತಿರಲಿಲ್ಲ.
ಆ ದಿನ ನಡೆದ ದುರಂತದಲ್ಲಿ ಒಂದು ಮನೆಯಲ್ಲಿ ತಾಯಿ ಮಗ ಇಲ್ಲ. ಇನ್ನೊಂದು ಮನೆಯ ಪತಿ, ಪತ್ನಿ ಇಲ್ಲ. ಮತ್ತೊಂದು ಮನೆಯ ಇಬ್ಬರು ಸೊಸೆಯಂದಿರಿಲ್ಲ. ಬದುಕಿಗೆ ಆಧಾರವಾಗಿದ್ದ ಜೀವನದಿಯೇ ಬಡ ಜೀವಗಳನ್ನು ಬಲಿ ಪಡೆದಿರುವುದಕ್ಕೆ ಇಡೀ ಊರಿನಲ್ಲಿ ಶೋಕ ಆವರಿಸಿದ್ದು, ಅದನ್ನು ಎಂದಿಗೂ ಮರೆಯುವ ಹಾಗಿಲ್ಲ. ಈ ದುರಂತದಲ್ಲಿ ಸಾವನಪ್ಪಿದ ಎಲ್ಲರೂ ದುಡಿಯುವ ವಯಸ್ಸಿನವರೇ ಆಗಿದ್ದರು. ಪ್ರಾಥಮಿಕ ಶಾಲೆಯಿಂದ ಕಾಲೇಜ್ಗೆ ತೆರಳುವ ಒಟ್ಟು 12 ಜನ ಗಂಡು ಮಕ್ಕಳು, 12 ಜನ ಹೆಣ್ಣು ಮಕ್ಕಳು ದೊಡ್ಡವರ ದುಡಿಮೆಯನ್ನೇ ನಂಬಿಕೊAಡಿದ್ದರು. ಓದು, ಉದ್ಯೋಗ, ಮದುವೆ, ಸಂಸಾರ ಹೀಗೆ ಹತ್ತಾರು ಕನಸು ಕಟ್ಟಿಕೊಂಡಿದ್ದವರನ್ನು ಆ ರಕ್ಕಸ ಅಲೆಯೊಂದು ನಾಶ ಮಾಡಿತು.