ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!
January 3, 2026
ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!
January 3, 2026
ರಂಜಿತಾ ಕೊಂದ ರಫೀಕ್ ಇನ್ನಿಲ್ಲ!
January 4, 2026
ಮಂಗಳ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದ ಮುರುಡೇಶ್ವರದ ಮಹಮದ್ ಖಾಸೀಂ ಅವರಿಗೆ ತಾಸೀನ್ ಎಂಬ ಮಹಿಳೆ ಲಡ್ಡುವೊಂದನ್ನು ಕೊಟ್ಟಿದ್ದಾರೆ. ಆ ಲಡ್ಡು ಸೇವಿಸಿದ ಮಹಮದ್ ಖಾಸೀಂ ಅವರು ನಿದ್ರೆಗೆ ಜಾರಿದ್ದು, ಅವರ ಬಳಿಯಿದ್ದ 4.75 ಲಕ್ಷ ರೂ ಹಣಹೊಡೆದು ತಾಸೀನ್ ಪರಾರಿಯಾಗಿದ್ದಾರೆ.
ಭಟ್ಕಳದ ಮುರುಡೇಶ್ವರ ನ್ಯಾಶನಲ್ ಕಾಲೋನಿಯಲ್ಲಿ ಮಹಮದ್ ಖಾಸೀಂ ಹಸನ್ ಸಾಬ್ ಅವರು ವಾಸವಾಗಿದ್ದಾರೆ. ಅದೇ ಪ್ರದೇಶದ ಮೊದಲನೇ ಅಡ್ಡರಸ್ತೆಯಲ್ಲಿ ಶೇಕ್ ರಿಯಾಜ್ ಗಿಡ್ಡಣ್ಣನವರ್ ಹಾಗೂ ಅವರ ಪತ್ನಿ ತಾಸೀನ್ ಭಾವಾಅಮೀರ್ ಮಂಕಿಸರ್ ಅವರು ವಾಸವಾಗಿದ್ದಾರೆ. ಶೇಕ್ ರಿಯಾಜ್ ಗಿಡ್ಡಣ್ಣನವರ್ ಹಾಗೂ ತಾಸೀನ್ ಭಾವಾಅಮೀರ್ ಮಂಕಿಸರ್ ಅವರ ವಿವಾಹ ವಿಚ್ಚೇದನ ನಡೆದಿದ್ದರೂ, ಅವರಿಬ್ಬರು ಒಟ್ಟಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಟ್ಕಳದಿಂದ ದೆಹಲಿಗೆ ಹೊರಟಿದ್ದ ಮಂಗಳ ಎಕ್ಸಪ್ರೆಸ್ ರೈಲಿನಲ್ಲಿ ಮಹಮದ್ ಖಾಸೀಂ ಹಸನ್ ಸಾಬ್ ಅವರು ಆಸೀನರಾಗಿದ್ದು, ತಾಸೀನ್ ಭಾವಾಅಮೀರ್ ಮಂಕಿಸರ್ ಅವರು ಈ ವೇಳೆ ಮಹಮದ್ ಖಾಸೀಂ ಹಸನ್ ಸಾಬ್ ಅವರ ಸ್ನೇಹ ಬೆಳೆಸಿದ್ದಾರೆ.
ರೈಲು ಅಂಕೋಲಾ ಬಳಿ ತಲುಪಿದಾಗ ಮಹಮದ್ ಖಾಸೀಂ ಹಸನ್ ಸಾಬ್ ಅವರಿಗೆ ತಾಸೀನ್ ಭಾವಾಅಮೀರ್ ಮಂಕಿಸರ್ ಅವರು ಪ್ರೀತಿಯಿಂದ ಲಡ್ಡು ನೀಡಿದ್ದಾರೆ. ಅಷ್ಟು ದೊಡ್ಡ ಲಡ್ಡು ಬೇಡ ಎಂದರೂ ಒತ್ತಾಯ ಮಾಡಿ ಅದನ್ನು ಮಹಮದ್ ಖಾಸೀಂ ಅವರಿಗೆ ತಿನ್ನಿಸಿದ್ದಾರೆ. ಆ ಲಡ್ಡು ತಿಂದ ನಂತರ ಮಹಮದ್ ಖಾಸೀಂ ಅವರು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಕೈ ಚಳಕ ಪ್ರದರ್ಶಿಸಿದ ತಾಸೀನ್ ಅವರು ಮಹಮದ್ ಸಾಬ್ ಅವರ ಬಳಿಯಿದ್ದ 4.75 ಲಕ್ಷ ರೂ ಎಗರಿಸಿದ್ದಾರೆ. ಅದಾದ ನಂತರ ರಾತ್ರಿ ಕಾರವಾರದಲ್ಲಿ ರೈಲು ಇಳಿದು ಪರಾರಿಯಾಗಿದ್ದಾರೆ. ಈ ಕಳ್ಳತನದಲ್ಲಿ ಶೇಕ್ ರಿಯಾಜ್ ಗಿಡ್ಡಣ್ಣನವರ್ ಸಹ ಭಾಗಿಯಾಗಿದ್ದಾರೆ.
ನಿದ್ದೆ ಬರುವ ಲಡ್ಡು ನೀಡಿ ಹಣ ಎಗರಿಸಿದ ಆರೋಪಿತರ ವಿರುದ್ಧ ಮಹಮದ್ ಸಾಬ್ ಅವರು ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಶಹರ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
You cannot copy content of this page