`ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾದಾಗ ಮಾತ್ರ ಸಹಕಾರ ಸಂಘಗಳು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಹೇಳಿದ್ದಾರೆ. ಯಲ್ಲಾಪುರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಸಹಕಾರಿ ಸಂಘಗಳೇ ರೈತರ ಜೀವಾಳ’ ಎಂದು ಪ್ರತಿಪಾದಿಸಿದ್ದಾರೆ.
`ಸಹಕಾರ ಸಂಘಗಳು ಸದಾ ರೈತರ ಹಿತ ಕಾಯುತ್ತವೆ. ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಬೇಕಾದದ್ದು ಸಮಾಜದ ಎಲ್ಲರ ಜವಾಬ್ದಾರಿ’ ಎಂದು ಅವರು ಹೇಳಿದ್ದಾರೆ. ಮಂಗಳವಾರ ಪಟ್ಟಣದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟಿಸಿದ ಅವರು `ಮಲೆನಾಡು ಪ್ರದೇಶದಲ್ಲಿ ಸಹಕಾರ ಸಂಘಗಳು ಸದಾ ರೈತರ ಕಷ್ಟಕ್ಕೆ ಸ್ವಂದಿಸುತ್ತ ಬಂದಿವೆ’ ಎಂದು ಸ್ಮರಿಸಿದ್ದಾರೆ.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, `ಹಿರಿಯ ಸಹಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಎಲ್ಎಸ್ಎಂಪಿ ಸೊಸೈಟಿ ಉತ್ತಮ ಸಾಧನೆ ಮಾಡುತ್ತಿದೆ. ರೈತರ ಎಲ್ಲ ಅಗತ್ಯಗಳಿಗೆ ನೆರವಾಗಿದೆ. ಸಹಕಾರ ಸಂಘದಲ್ಲಿ ಆರೋಗ್ಯಪೂಣ9 ಸ್ಪಧೆ9 ಇರಲಿ. ರೈತರು ಸಹಕಾರ ಸಂಘದ ಮೂಲಕವೇ ತಮ್ಮ ಮಹಸೂಲನ್ನು ವಿಕ್ರಿ ಮಾಡಬೇಕು’ ಎಂದು ಕರೆ ನೀಡಿದರು. ವಿಶ್ವದಶನ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ ಸಹಕಾರಿ ಸಂಘಗಳು ಅನ್ಯಗತ್ಯವಾಗಿ ಕೋರ್ಟು-ಕಚೇರಿ ಕೆಲಸಕ್ಕೆ ಹೋಗುತ್ತಿರುವ ಬಗ್ಗೆ ವಿಷಾಧಿಸಿದರು. ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಅಧ್ಯಕ್ಷತೆವಹಿಸಿದ್ದರು. ಪ್ರಿಯಾ ಎಂ ಭಟ್ಟ ಪ್ರಾಥಿ9ಸಿದರು. ಸಂಘದ ಉಪಾಧ್ಯಕ್ಷ ಟಿ ಆರ್ ಹೆಗಡೆ ಸ್ವಾಗತಿಸಿದರು. ನಿದೇ9ಶಕ ನರಸಿಂಹ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಮುಖ್ಯಕಾಯ9ನಿವಾ9ಹಕ ಎಂ ಎಸ್ ಹೆಗಡೆ, ಪ್ರಮುಖರಾದ ಪ್ರಮೋದ ಹೆಗಡೆ, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಕೃಷ್ಣ ಹೆಗಡೆ ಜೂಜಿನಬೈಲು, ಉಮೇಶ ಭಾಗ್ವತ, ಸಂತೋಷ ಭಟ್ಟ, ಆರ್ ಎಸ್ ಭಟ್ಟ, ಪ್ರಭಾ ಪ್ರಕಾಶ ಭಾಗ್ವತ, ಶ್ಯಾಮಲಾ ಹೆಗಡೆ, ಅಪ್ಪು ಆಚಾರಿ ಇದ್ದರು.