ಭಟ್ಕಳದ ಶಿರಾಲಿ ಆಲ್ವೆಕೋಡಿ ಬಳಿ ಚಿಪ್ಪೆಕಲ್ಲು ಆರಿಸಲು ನದಿಗೆ ಹೋಗಿ ನೀರು ಪಾಲಾದವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಸಿಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈ ಪರಿಹಾರ ನೀಡಿದ್ದಾರೆ.
ಢಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ಹೋಗಿ ನೀರಿನಲ್ಲಿ ಮುಳಗಿ ಮೃತಪಟ್ಟ 11 ಮಂದಿಯ ಅವಲಂಬಿತರ ಮನೆಗಳಿಗೆ ತೆರಳಿ ಮೃತಪಟ್ಟವರ ವಾರಿಸುದಾರರಿಗ16,50,000ರೂ ಗಳ ಪರಿಹಾರದ ಚೆಕ್ ನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಂಕಾಳ ಎಸ್ ವೈದ್ಯ ಶುಕ್ರವಾರ ವಿತರಿಸಿದರು ಬಳಿಕ ಮಾತನಾಡಿದ ಅವರು, ಭಟ್ಕಳದಲ್ಲಿ ನಡೆದ ಕಪ್ಪೆ ಚಿಪ್ಪು ದುರಂತದಲ್ಲಿ ಮೃತ ಪಟ್ಟ 11 ಮಂದಿಗೆ ಪ್ರತಿಯೊಬ್ಬರಿಗೂ ರಾಜ್ಯ ರ್ಕಾರ ರೂ. 5 ಲಕ್ಷದಂತೆ ಪರಿಹಾರ ಘೋಷಿಸಿದ್ದ ಒಟ್ಟು ರೂ.55 ಲಕ್ಷ ಹಾಗೂ ಮೀನುಗಾರಿಕೆ ಇಲಾಖೆ ವತಿಯಿಂದ ತಲಾ 10 ಲಕ್ಷದಂತೆ ಒಟ್ಟು 1 ಕೋಟಿ 10 ಲಕ್ಷ ರೂಪಾಯಿ ಹಾಗೂ ಜನತಾ ಕೋ ಆಪರೇಟಿವ್ ಬ್ಯಾಂಕ ನಿಂದ ರೂ.50,000 ಮತ್ತು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ 1 ಲಕ್ಷ ಗಳ ಸಹಾಯಧನ ನೀಡಲಾಗಿದ್ದು, ಮನೆ ಇಲ್ಲ ಎಂದವರಿಗೆ ವೈಯಕ್ತಿಕವಾಗಿ 5 ಲಕ್ಷ ರೂ ನೀಡಿದ್ದು, ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಭಾಗದಲ್ಲಿ ನದಿಯಲ್ಲಿ ಕಪ್ಪೆಚಿಪ್ಪು ತೆಗೆಯುವುದು ಹಿಂದಿನಿಂದಲೂ ಪಾರಂಪರಿಕವಾಗಿ ಬಂದ ವೃತ್ತಿಯಾಗಿದ್ದು, ನದಿಯಲ್ಲಿ ಕಲ್ಲಿನ ಮೇಲೆ ಕಪ್ಪೆಚಿಪ್ಪುಗಳು ಇರುವುದನ್ನು ತೆಗೆಯಲು ಹೋದಾಗ ಒಬ್ಬರು ಆಳವಾದ ನೀರಿನಲ್ಲಿ ಮುಳುಗಿದಾಗ ಅವರನ್ನು ಕಾಪಾಡಲು ಹೋಗಿ ಎಲ್ಲರೂ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಇಂತಹ ಅನಾಹುತಗಳ ಮರುಕಳಿಸದಂತೆ ಮುಂಜಾಗ್ರತ ಕ್ರಮವಿಲ್ಲದೇ ಯಾರೂ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ ಎಂದರು.
ಮೃತ ಅವಲಂಬಿತರ ಕುಟುಂಬದಲ್ಲಿನ ಒಬ್ಬರಿಗೆ ಸಹಕಾರಿ ಬ್ಯಾಂಕ್ನಲ್ಲಿ ಉದ್ಯೋಗ ನೀಡುವ ಬಗ್ಗೆ ಚಿಂತನೆ ನಡೆಸಿದ್ದು, ಕುಟುಂದವರಿಗೆ ರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಸಹಕಾರ ಒದಗಿಸಲಾಗುವುದು. ಮೃತ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಸಂಪರ್ಣ ಜವಾಬ್ದಾರಿ ಈ ಭಾಗದ ಶಾಸಕನಾಗಿ ನಾನು ವಹಿಸಿಕೊಳ್ಳಲಿದ್ದು, ಈ ಭಾಗದ ಜನರು, ಸಂಘ ಸಂಸ್ಥೆಗಳು, ದಾನಿಗಳೂ ಮೃತ ಕುಟುಂಬದ ಅವಲಂಬಿತರಿಗೆ ಸಹಾಯ ಹಸ್ತ ನೀಡಲು ಮುಂದಾಗಬೇಕು ಎಂದರು.