ಆಧ್ಯಾತ್ಮಿಕ ಗುರು ಶ್ರೀ ಯೋಗಿ ಅವರು ರಚಿಸಿದ `ದಿ ವಾಂಡರರ್ ಹೂ ಇನ್ಸ್ ದಿ ವರ್ಡ’ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ. ಮೇ 7ರ ಗುರುವಾರ ಪುಸ್ತಕ ಬಿಡುಗಡೆ ಆಗಲಿದ್ದು, ನಂತರ ಈ ಪುಸ್ತಕ ಶಿರಸಿಯಲ್ಲಿಯೂ ಸಿಗಲಿದೆ.
ಬೆಂಗಳೂರಿನ ಇಂದಿರಾ ನಗರದಲ್ಲಿರುವ ಆಟ್ಟಾ ಗಲಾಟ್ಟದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ಈ ಪುಸ್ತಕ ಲೋಕಾರ್ಪಣೆ ಆಗಲಿದೆ. ಅದಾದ ನಂತರ ದೇಶದ ಎಲ್ಲಡೆ ಪುಸ್ತಕ ಪೂರೈಕೆಗೆ ನಿರ್ಧರಿಸಲಾಗಿದೆ. `ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ’ ಈ ಪುಸ್ತಕದ ಪ್ರಕಾಶನ ಜವಾಬ್ದಾರಿವಹಿಸಿಕೊಂಡಿದೆ. ಆಧುನಿಕ ಜೀವನ ಶೈಲಿ, ಯಶಸ್ಸು, ಗುರುತು ಹಾಗೂ ಅಂತರAಗದ ನೆಮ್ಮದಿಯ ಕುರಿತಾಗಿ ಶ್ರೀಗಳು ಪುಸ್ತಕ ಬರೆದಿದ್ದಾರೆ. ಈ ವೈಚಾರಿಕ ಕೃತಿಯಲ್ಲಿ ಹತ್ತು ಹಲವು ಅಂಶಗಳ ಬಗ್ಗೆ ವಿವರಿಸಲಾಗಿದೆ.
ಸಂಸದ ಸಿ ಎನ್ ಮಂಜುನಾಥ್, ಡಿವೈಎಸ್ಪಿ ಸುಧೀರ್ ಎಂ ಹೆಗ್ಡೆ, ನಿವೃತ್ತ ಪ್ರಾಧ್ಯಾಪಕ ಜಿ ಅಶ್ವತ್ಥನಾರಾಯಣ್, ಮೂಳೆ ತಜ್ಞ ಡಾ ದೇವೇಂದ್ರ ಗುಪ್ತಾ ಕೆ ಎಸ್, ವೈದ್ಯರಾದ ಡಾ ಸಂಜಯ್ ನೀರಲಗಿ, ಡಾ ಸವಿತಾ ಎಸ್ ನೀರಲಗಿ, ಡಾ ಪದ್ಮನಾಭನ್ ಅವರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕವಿಗಳಾದ ಮಂಡಲಗಿರಿ ಪ್ರಸನ್ನ, ನಟಿ ತಾರಾ ಅನುರಾಧ, ನಟ ರಾಣಾ ಹಾಗೂ ಉದ್ಯಮಿ ಸುಂಕು ನರೇಂದ್ರನಾಥ್ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶಿರಸಿಯಲ್ಲಿ ಪುಸ್ತಕಪಡೆಯಲು ಇಲ್ಲಿ ಫೋನ್ ಮಾಡಿ: 9448760413