ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಿದ್ದ ಸಿದ್ದಾಪುರದ ಅಭಿರಾಮ ಹೆಗಡೆ ಅವರು `ನನ್ನ ಸಾವಿಗೆ ನಾನೇ ಕಾರಣ’ ಎಂದು ಪಟ್ಟಿಯಲ್ಲಿ ಬರೆದು ಸಹಿ ಮಾಡಿದ್ದಾರೆ. ಅದಾದ ನಂತರ ಶೌಚಾಲಯಕ್ಕೆ ಹೋಗಿ ಅವರು ಅಲ್ಲಿ ನೇಣಿಗೆ ಶರಣಾಗಿದ್ದಾರೆ.
ಸಿದ್ದಾಪುರದ ಕಾನಸೂರಿನ ಬಳಿ ಅಭಿರಾಮ ವೆಂಕಟ್ರಮಣ ಹೆಗಡೆ ಅವರು ವಾಸವಾಗಿದ್ದರು. 21 ವರ್ಷದ ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರವೇಶಪಡೆದಿದ್ದರು. ಅಲ್ಲಿ ಅವರು ಬಿ ಕಾಂ ಎರಡನೇ ವರ್ಷ ಓದುತ್ತಿದ್ದು, ನಾಲ್ಕನೇ ಸಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಮರಳಿದ್ದರು. ಜೂನ್ 22ರಂದು ಮನೆಗೆ ಬಂದ ಅಭಿರಾಮ ಹೆಗಡೆ ಅವರು ಪರೀಕ್ಷೆಯಲ್ಲಿ ಫೇಲಾಗುವ ಭಯದಲ್ಲಿದ್ದರು.
ಜೂನ್ 26ರ ಮಧ್ಯಾಹ್ನ ಅಭಿರಾಮ ಹೆಗಡೆ ಅವರ ತಾಯಿ ಕೆಲಸಕ್ಕಾಗಿ ಕಾನಸೂರಿಗೆ ಹೋಗಿದ್ದರು. ಈ ವೇಳೆ ಅಭಿರಾಮ ಹೆಗಡೆ ಅವರು ಮನೆಯಲ್ಲಿ ಒಬ್ಬರೇ ಇದ್ದು, ಸಾವಿನ ನಿರ್ಧಾರ ಮಾಡಿದರು. ಓದು-ಬರಹಕ್ಕಾಗಿ ತಂದೆ ತೆಗೆಸಿಕೊಟ್ಟಿದ್ದ ನೋಟ್ಬುಕ್ ಮೊದಲ ಪುಟಲದಲ್ಲಿ `ನನ್ನ ಸಾವಿಗೆ ನಾನೇ ಕಾರಣ’ ಎಂದು ಅಭಿರಾಮ ಹೆಗಡೆ ಅವರು ಬರೆದು ಸಹಿ ಮಾಡಿದರು. ಅದಾದ ನಂತರ ಎರಡನೇ ಪುಟದಲ್ಲಿ `ನನ್ನ ಓದು ಅಷ್ಟಕಷ್ಟೇ. ತನ್ನ ಜೀವನ ಚನ್ನಾಗಿರಲ್ಲ. ತನಗೆ ಸಾಧಿಸಬೇಕು ಎಂಬ ಹಠವೂ ಇಲ್ಲ. ಟ್ಯೂಶನ್ ಸೇರುವ ಆಸಕ್ತಿ ಇಲ್ಲ. ಬದುಕಿ ಪ್ರಯೋಜನವಿಲ್ಲ’ ಎಂದು ಬರೆದರು.
ಅದಾದ ನಂತರ ಸ್ನಾನದ ಕೋಣೆಗೆ ಹೋದ ಅಭಿರಾಮ ಹೆಗಡೆ ಅವರು ಅಲ್ಲಿದ್ದ ಜಂತಿಗೆ ನೇಣು ಹಾಕಿಕೊಂಡರು. ಸಂಜೆ ಮನೆಗೆ ಮರಳಿದ ಅವರ ತಾಯಿ ಮಗನ ಆತ್ಮಹತ್ಯೆಯ ದೃಶ್ಯ ನೋಡಿ ಆಘಾತಕ್ಕೆ ಒಳಗಾದರು. ಮಗನ ಸಾವಿನ ಬಗ್ಗೆ ವೆಂಕಟ್ರಮಣ ಹೆಗಡೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು.