ಶಿರಸಿಯ ಶಕ್ತಿಪೀಠವಾದ ಮಾರಿಕಾಂಬಾ ದೇವಾಲಯಕ್ಕೆ ಧರ್ಮದರ್ಶಿ ಮಂಡಳಿ ಆಯ್ಕೆ ನಡೆದಿದೆ. ನಿವೃತ್ತ ಇಂಜಿನಿಯರ್ ವಿನಾಯಕ ಶೇಟ್ ಅವರ ಜೊತೆ ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಅರ್ಚನಾ ರಾಘವೇಂದ್ರ ಹೊನ್ನಾವರ, ನಿವೃತ್ತ ಖಜಾನೆ ಅಧಿಕಾರಿ ರವಿ ಬೆಳ್ಳಿಮನೆ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಅಶೋಕ ಪವಾರ್ ಹಾಗೂ ಕೇಶವ ಹೆಗಡೆ ಅವರು ಧರ್ಮದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಕಾರವಾರದಲ್ಲಿ ಸಂದರ್ಶನ ಪ್ರಕ್ರಿಯೆ ನಡೆದಿದ್ದು, ನ್ಯಾಯಾಧೀಶರಿಂದ ಈ ಆಯ್ಕೆ ನಡೆದಿದೆ. ಧರ್ಮದರ್ಶಿ ಹುದ್ದೆಗೆ ೨೦೦ಕ್ಕೂ ಅರ್ಜಿ ಸಲ್ಲಿಕೆಯಾಗಿತ್ತು. ಅನುಭವ, ಸಾಮಾಜಿಕ ಸೇವೆ ಹಾಗೂ ಆಡಳಿತಾತ್ಮಕ ಹಿನ್ನಲೆ ಪರಿಗಣಿಸಿ ಐವರ ಹೆಸರು ಅಂತಿಮವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ಶಿರಸಿಯ ಮಾರಿಕಾಂಬಾ ಸನ್ನಿಧಿ ಗುರುತಿಸಿಕೊಂಡಿದ್ದು, ಲಕ್ಷಾಂತರ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ. ಹೀಗಾಗಿ ಈ ದೇಗುಲದ ಧರ್ಮದರ್ಶಿ ಹುದ್ದೆ ಪ್ರತಿಷ್ಠೆಯ ಸಂಕೇತವಾಗಿದೆ. ದೇವಿ ಸೇವೆ ಮಾಡಲು ಬಯಸುವವರಿಗೂ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಧರ್ಮದರ್ಶಿ ಆಗಲು ಪೈಪೋಟಿಗೆ ಬಿದ್ದು ಜನ ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶರು ಧರ್ಮದರ್ಶಿಗಳ ಆಯ್ಕೆ ಮಾಡುತ್ತಾರೆ.