ಯಲ್ಲಾಪುರದ ಮಂಚಿಕೇರಿ ಬಳಿ ಬೆಳೆದ ತೆಂಗಿನ ಮರಗಳಿಗೆ ವಿಚಿತ್ರ ರೋಗ ಬಂದಿದೆ. ಆರೋಗ್ಯವಾಗಿಯೇ ಇದ್ದ ತೆಂಗಿನ ಮರಗಳು ದಿಢೀರ್ ಆಗಿ ಸಾವನಪ್ಪುತ್ತಿವೆ. ಸಾಲು ಸಾಲು ತೆಂಗಿನ ಮರಗಳು ಸಾಯುತ್ತಿರುವುದನ್ನು ನೋಡಿ ಬೆಳೆಗಾರರು ಕಂಗಾಲಾಗಿದ್ದಾರೆ.
ಮAಚಿಕೇರಿಯ ಮುಕ್ತಾರ್ ಶೇಖ್, ತವಾಬ್ ಸಯ್ಯದ್, ಅಮೀನಾ ಸಾಬ್ ಅವರು ಅಂಗಳದಲ್ಲಿ ಬೆಳೆದಿದ್ದ ತೆಂಗಿನ ಮರಗಳು ಏಕಾಏಕಿ ಸಾವನಪ್ಪಿದೆ. 25-30 ವರ್ಷದಿಂದ ಸರಿಯಾಗಿಯೇ ಇದ್ದ ಮರಗಳು ಒಮ್ಮೆಲೆ ಸಾವನಪ್ಪಿರುವುದನ್ನು ನೋಡಿ ಅಲ್ಲಿನವರು ಕಾರಣ ಹುಡುಕುತ್ತಿದ್ದಾರೆ. ತೆಂಗಿನ ಮರ ಸಮೀಪ ಹೋಗಿ ನೋಡಿದಾಗ ಅಲ್ಲಿ ದುಂಬಿಯ ಕಾಟ ಕಾಣಿಸಿಲ್ಲ. ಬೇರೆ ಬೇರೆ ಪ್ರಾಣಿಯ ಬಾದೆಗಳು ಅಷ್ಟಾಗಿ ಇಲ್ಲ. ಅದಾಗಿಯೂ, ತೆಂಗಿನ ಮರಗಳ ನಿಗೂಢ ಸಾವು ಅದರ ತೆಂಗು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಮಂಚಿಕೇರಿ ಬಸ್ ನಿಲ್ದಾಣ ಬಳಿಯ ಉರ್ದು ಶಾಲೆ ಎದುರು ಸಾಲು ಸಾಲಾಗಿ ತೆಂಗಿನ ಮರಗಳು ಒಣಗಿರುವುದು ಕಾಣಿಸುತ್ತಿದೆ. ತೆಂಗಿನ ಮರದ ಬಳಿ ಹೋದರೆ ದುರ್ವಾಸನೆ ಬರುತ್ತಿದೆ. ಹೀಗಾಗಿ ಮರ ಏರಿ ಏನಾಗಿದೆ? ಎಂದು ನೋಡುವವರು ಸಹ ಸಿಗುತ್ತಿಲ್ಲ. ಕಳೆದ ಒಂದು ತಿಂಗಳಿನಿAದ ತೆಂಗಿನ ಮರಗಳು ಒಂದೊAದಾಗಿ ಸಾವನಪ್ಪುತ್ತಿದ್ದು, ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.
`ಇಲ್ಲಿ ವಾಸಿಸುವ ಅನೇಕರು ಮನೆ ಬಳಕೆಗೆ ಅನುಕೂಲವಾಗುವಂತೆ ತೆಂಗಿನ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ಆದರೆ, ಇದೀಗ ಏಕಾಏಕಿ ಮರ ಸಾವನಪ್ಪುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 20ಕ್ಕೂ ಅಧಿಕ ಮರಗಳು ಸಾವನಪ್ಪಿದೆ. ತಜ್ಞರು ಸ್ಥಳ ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಭೂ ನ್ಯಾಯ ಮಂಡಳಿ ಸದಸ್ಯ ವಿಕಾಸ ನಾಯ್ಕ ಅವರು ಆಗ್ರಹಿಸಿದ್ದಾರೆ. `ಮೇಲ್ನೋಟಕ್ಕೆ ಚಂಡೆ ಕೊಳೆ ರೋಗದಿಂದ ಮರ ಸಾವನಪ್ಪಿರುವ ಹಾಗಿದೆ. ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರಕ್ಕೆ ಸಲಹೆ ಕೊಡಲಾಗುತ್ತದೆ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಅವರು ಹೇಳಿದ್ದಾರೆ.