ಅರಣ್ಯ ಹಕ್ಕು ಕಾಯ್ದೆ ಅಡಿ ತಿರಸ್ಕಾರವಾದ ಅರ್ಜಿ ವಿಷಯವಾಗಿ ಸಿದ್ದಾಪುರ ತಹಶೀಲ್ದಾರರಿಗೆ ಹೋರಾಟಗಾರರು 10 ಪ್ರಶ್ನೆ ಕೇಳಿದ್ದು, ಇದಕ್ಕೆ 10 ದಿನದಲ್ಲಿ ಉತ್ತರ ಕೊಡುವುದಾಗಿ ಎಂದು ಸಿದ್ದಾಪುರದ ತಹಶೀಲ್ದಾರ ಎಮ್ ಆರ್ ಕುಲಕರ್ಣಿ ಅವರು ಹೇಳಿದ್ದಾರೆ.
ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಮಹಜರ್ ಪ್ರಕ್ರಿಯೆಯಲ್ಲಿ ಉಂಟಾದ ನ್ಯೂನ್ಯತೆಯ ಸ್ಪಷ್ಠೀಕರಣ ಕೋರಿ ಮೇ 20ರಂದು ರವೀಂದ್ರ ನಾಯ್ಕ ಅವರು ಅರ್ಜಿ ಸಲ್ಲಿಸಿದ್ದರು. ಈವರೆಗೂ ಉತ್ತರ ಬಾರದ ಕಾರಣ ಹೋರಾಟ ವೇದಿಕೆಯವರು ಸಿದ್ದಾಪುರದಲ್ಲಿ ಧರಣಿ ನಡೆಸಿದ್ದು, ಅರಣ್ಯವಾಸಿಗಳನ್ನು ತಹಶೀಲ್ದಾರರು ಸಮಾಧಾನ ಮಾಡಿದರು. ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಹಜರ್ ಪ್ರಕ್ರಿಯೆ ನಡೆದ ಬಗ್ಗೆ ಪ್ರತಿಭಟನಾಕಾರರು ಆಕ್ಷೇಪಿಸಿದರು.
3 ತಿಂಗಳಾದರೂ ಸ್ಪಷ್ಠೀಕರಣ ಸಿಗದ ಬಗ್ಗೆ ಪ್ರಶ್ನಿಸಿದರು. ನಂತರ ನಡೆದ ಸೌಹಾರ್ದಯುತ ಚರ್ಚೆಯಲ್ಲಿ 10 ದಿನದ ಒಳಗೆ ಉತ್ತರ ಕೊಡುವುದಾಗಿ ಅಧಿಕಾರಿಗಳು ಹೇಳಿದರು. `ನ್ಯೂನ್ಯತೆಯನ್ನು ಸರಿದೂಗಿಸಿ ಮಹಜರ್ ಪ್ರಕ್ರಿಯೆ ಮುಂದುವರೆಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿವಿಧ ನ್ಯೂನ್ಯತೆಗಳ ಬಗ್ಗೆಯೂ ಮತ್ತೊಮ್ಮೆ ಗಮನಸೆಳೆದರು.