ಕೆನರಾ ಬ್ಯಾಂಕಿನಲ್ಲಿ ಖಾತೆಹೊಂದಿದ್ದ ಜಗದೀಶ ನಾಯ್ಕ ಅವರು ಆನ್ಲೈನ್ ವಂಚನೆಗೆ ಒಳಗಾಗಿದ್ದು, ಆ ವಂಚನೆ ತಡೆಗೆ ವಿಫಲವಾದ ಬ್ಯಾಂಕ್ ಮ್ಯಾನೇಜರ್ಗೆ ದಂಡ ಬಿದ್ದಿದೆ. ವಂಚನೆಗೆ ಒಳಗಾದ 20 ಲಕ್ಷ ರೂ ಹಣದ ಜೊತೆ ಶೇ 8ರ ಬಡ್ಡಿಯನ್ನು ವಿಧಿಸಿ ಪರಿಹಾರ ಕೊಡಬೇಕು ಎಂದು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಭಟ್ಕಳದ ಬೆಳಕೆ ಗ್ರಾಮ ಪಂಚಾಯತ ಮಾಜಿ ಸದಸ್ಯ ಜಗದೀಶ ನಾಯ್ಕ ಅವರು ಕೆನರಾ ಬ್ಯಾಂಕಿನ ಬೆಳಕೆ ಶಾಖೆಯಲ್ಲಿ ಖಾತೆ ಹೊಂದಿದ್ದರು. ಅಲ್ಲಿ ಅವರು ಒಡಿ ಖಾತೆಯನ್ನು ತೆರೆದಿದ್ದರು. ಅವರ ಖಾತೆಯಲ್ಲಿದ್ದ ಹಣ ಕಡತವಾದ ಬಗ್ಗೆ ಮೆಸೆಜ್ ಬಂದಿತ್ತು. 2025ರ ಫೆಬ್ರವರಿ 9ರಂದು ಹಣ ಕಡತವಾದ ಬಗ್ಗೆ ಅವರು ಬ್ಯಾಂಕಿಗೆ ಮಾಹಿತಿ ನೀಡಿದ್ದರು. ಜೊತೆಗೆ ಬ್ಯಾಂಕಿನ ಕೇಂದ್ರ ಕಚೇರಿ, ಕಾರವಾರ ಪ್ರಾದೇಶಿಕ ಕಚೇರಿ ಹಾಗೂ ಸೈಬರ್ ಅಪರಾಧಗಳ ಸಹಾಯವಾಗಿ 1930ಗೆ ಫೋನ್ ಮಾಡಿ ದೂರು ದಾಖಲಿಸಿದ್ದರು. `ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ, ಕಡಿತವಾದ ಹಣವನ್ನು ಮರಳಿಸಬೇಕು’ ಎಂದು ಅವರು ಮನವಿ ಮಾಡಿದಲ್ಲದೇ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೂ ಅದೇ ದಿನ ದೂರು ನೀಡಿದ್ದರು. ಅದಾಗಿಯೂ, ಅವರ ಬ್ಯಾಂಕ್ ಖಾತೆಯಿಂದ 20.21 ಲಕ್ಷ ರೂ ವಂಚಕರ ಪಾಲಾಗಿತ್ತು.
`ತಮ್ಮ ಖಾತೆಯಲ್ಲಿದ್ದ ಹಣವನ್ನು ಭದ್ರವಾಗಿರಿಸುವಲ್ಲಿ ಬ್ಯಾಂಕ್ ನಿರ್ಲಕ್ಷ್ಯವಹಿಸಿದೆ. ದೂರು ನೀಡಿದರೂ ಸಹ ಹಣ ಮರಳಿಸಲು ಬ್ಯಾಂಕ್ ಅಧಿಕಾರಿಗಳು ಆಸಕ್ತಿವಹಿಸಿಲ್ಲ. ಆ ಹಣ ಹರಿಯಾಣದ ದೀಪಕ್ ಕುಮಾರ್ ಎಂಬಾತರ ಖಾತೆ ಸೇರಿ ಅಲ್ಲಿಂದ ಬೇರೆಡೆ ಹಸ್ತಾಂತರವಾದರೂ ಬ್ಯಾಂಕ್ ಗಮನಹರಿಸಿಲ್ಲ’ ಎಂದು ಜಗದೀಶ ನಾಯ್ಕ ಅವರು ಆಕ್ಷೇಪಿಸಿ ಗ್ರಾಹಕ ವೇದಿಕೆಯ ಮೊರೆ ಹೋದರು. `ಸೈಬರ್ ವಂಚನೆಯಿOದ ತಾವು ಕಳೆದುಕೊಂಡ ಹಣವನ್ನು ಬ್ಯಾಂಕ್ನಿAದಲೇ ವಾಪಸ್ ಕೊಡಿಸಬೇಕು ಮತ್ತು ಪರಿಹಾರ ಕೊಡಿಸಬೇಕು’ ಎಂದು ಮನವಿ ಮಾಡಿದರು.
`ಜಗದೀಶ ನಾಯ್ಕ ಅವರು ಬ್ಯಾಂಕ್ ಖಾತೆಯ ಇಂಟರ್ನೆಟ್ ಬ್ಯಾಂಕಿoಗ್ನ ಯೂಸರ್ ನೇಮ್ ಹಾಗೂ ಪಾಸ್ವರ್ಡನು ಸ್ವತಃ ರಚಿಸಿಕೊಂಡಿದ್ದಾರೆ. ವಂಚನೆ ನಡೆಯುವ ಎರಡು ದಿನ ಮುಂಚಿತವಾಗಿ ಅವರು ಇಂಟರ್ನೆಟ್ ಬ್ಯಾಂಕಿoಗ್ನ ಯೂಸರ್ನೇಮ್ ಹಾಗೂ ಪಾಸ್ವರ್ಡ್ ಬದಲಿಸಿದ್ದಾರೆ. ನೋಂದಾಯಿತ ಮೊಬೈಲ್ ಸಂಖ್ಯೆಯಿoದ OTP ಬಳಸಿ ಅಧಿಕೃತ ವಹಿವಾಟೇ ನಡೆದಿದಿರುವ ಬಗ್ಗೆ ಬ್ಯಾಂಕ್ನ ಇಂಟರ್ನೆಟ್ ಬ್ಯಾಂಕಿoಗ್ನ ಯುಇಬಿಟಿ ವಿಭಾಗ ತಿಳಿಸಿದೆ. ಬ್ಯಾಂಕ್ ಖಾತೆ ಹ್ಯಾಕ್ ಅಥವಾ ಪಾಸ್ವರ್ಡ್ ಸೋರಿಕೆ ಮುಂತಾದ ಯಾವುದೇ ನಿರ್ಲಕ್ಷ್ಯ ಬ್ಯಾಂಕ್ನಿoದ ನಡೆದಿಲ್ಲ’ ಎಂದು ಬ್ಯಾಂಕ್ ಅಧಿಕಾರಿಗಳು ವಾದ ಮಂಡಿಸಿದ್ದರು.
ಆದರೆ, `ತಾನು ದೂರು ನೀಡಿದರೂ ಕ್ರಮವಾಗಿಲ್ಲ’ ಎಂದು ಜಗದೀಶ ನಾಯ್ಕ ಅವರು ದಾಖಲೆಗಳ ಜೊತೆ ಮನವರಿಕೆ ಮಾಡಿದರು. ಈ ವೇಳೆ ಬ್ಯಾಂಕ್ ಅಧಿಕಾರಿಗಳ ವಾದ ಒಪ್ಪದ ಆಯೋಗ `ಬ್ಯಾಂಕ್ ಅಧಿಕಾರಿಗಳಿಂದ ಮೊದಲು ಯಾವುದೇ ತಪ್ಪು ನಡೆದಿಲ್ಲ ಎಂಬುದು ಸತ್ಯ. ಆದರೆ, ವಂಚನೆಯಾದ ಬಗ್ಗೆ ಗ್ರಾಹಕ ದೂರು ನೀಡಿದರೂ ಕ್ರಮ ಜರುಗಿಸದಿರುವುದು ತಪ್ಪು’ ಎಂದು ಅಭಿಪ್ರಾಯಪಟ್ಟಿತು. `ಖಾತೆ ಫ್ರೀಜ್ ಮಾಡಿ ಮಧ್ಯವರ್ತಿ ಬ್ಯಾಂಕ್ನಿoದ ಹಣವನ್ನು ವಾಪಸ್ ಪಡೆಯಲು ಅವಕಾಶವಿತ್ತು. ಆ ವಿಳಂಬಕ್ಕೆ ಬ್ಯಾಂಕ್ ಅಧಿಕಾರಿಗಳೇ ಜವಾಬ್ದಾರರು’ ಎಂದು ಅಭಿಪ್ರಾಯಪಟ್ಟಿತು. ಕಾರವಾರ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದ ಅಧ್ಯಕ್ಷ ಮಾರುತಿ ವಡ್ಡರ್ ಮತ್ತು ಸದಸ್ಯೆ ನಯನಾ ಕಾಮಟೆ ಅವರು ಈ ಪ್ರಕರಣ ಪರಿಶೀಲಿಸಿ, ಸಾಕ್ಷಿಗಳನ್ನು ಗಮನಿಸಿದರು. ಕೊನೆಗೆ `ಗ್ರಾಹಕ ಕಳೆದುಕೊಂಡ 20.21 ಲಕ್ಷ ರೂಪಾಯಿಗಳನ್ನು ಬೆಳಕೆ ಬ್ಯಾಂಕ್ ಮ್ಯಾನೇಜರ್ ಹಾಗೂ ಕಾರವಾರ ರೀಜನಲ್ ಮ್ಯಾನೇಜರ್ ಜಂಟಿಯಾಗಿ ಶೇ 8ರ ಬಡ್ಡಿಯೊಂದಿಗೆ ನೀಡಬೇಕು’ ಎಂದು ಆದೇಶಿಸಿದರು. ಜೊತೆಗೆ `ಹಣ ಕಳೆದುಕೊಂಡ ಜಗದೀಶ ನಾಯ್ಕ ಅವರು ಮಾನಸಿಕ ಕಿರುಕುಳ ಅನುಭವಿಸದಕ್ಕಾಗಿ 25 ಸಾವಿರ ರೂ ಹಾಗೂ ಪ್ರಕರಣದ ವೆಚ್ಚ 10 ಸಾವಿರ ರೂಪಾಯಿಯನ್ನು ಎದುರುದಾರರು ಪಾವತಿಸಬೇಕು’ ಎಂದು ಸೂಚಿಸಿದರು.