ಶಿರಸಿಯ ಶೆಟ್ಟಿ ಲಂಚ್ ಹೋಂ’ಗೆ ಬರುವ ಗ್ರಾಹಕರಿಗೆ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದ ಸುಧಾಕರ ಭಂಡಾರಿ ಅವರು ಸಾವನಪ್ಪಿದ್ದಾರೆ. ಅಡುಗೆ ಮಾಡಿ ಕುಳಿದಿದ್ದ ಅವರು ಕುಸಿದು ಬಿದ್ದಿದ್ದು, ನಾಲ್ಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಬದುಕಲಿಲ್ಲ.
ಉಡುಪಿ ಬ್ರಹ್ಮಾನವರದ ಅವಂಜಿ ಬಳಿಯ ಸುಧಾಕರ್ ಗೋಪು ಭಂಡಾರಿ ಅವರು ಶಿರಸಿಗೆ ಬಂದು ವಾಸವಾಗಿದ್ದರು. ಶಿರಸಿ ಹುತಗಾರಿನ ಚಂದ್ರಶೇಖರ ಅಂತಯ್ಯ ಶೆಟ್ಟಿ ಅವರು ನಡೆಸುವ ಶೆಟ್ಟಿ ಲಂಚ್ ಹೋಂ’ಗೆ ಅವರು ಕೆಲಸ ಕೇಳಿ ಬಂದಿದ್ದರು. ಸುಧಾಕರ ಭಂಡಾರಿ ಅವರ ಕೈರುಚಿ ನೋಡಿದ ಚಂದ್ರಶೇಖರ ಶೆಟ್ಟಿ ಅವರು ತಮ್ಮ ಹೊಟೇಲಿನಲ್ಲಿ ಅಡುಗೆ ಮಾಡುವ ಕೆಲಸ ಕೊಟ್ಟಿದ್ದರು. 73 ವರ್ಷವಾಗಿದ್ದರೂ ಅವರು ಅತ್ಯಂತ ಪ್ರೀತಿಯಿಂದ ಅಡುಗೆ ಮಾಡಿ, ಬಡಿಸುತ್ತಿದ್ದರು.
ಎಂದಿನAತೆ, ಏಪ್ರಿಲ್ 24ರಂದು ಸುಧಾಕರ ಭಂಡಾರಿ ಅವರು ಹೊಟೇಲಿಗೆ ಬಂದಿದ್ದರು. ಅಲ್ಲಿ ಅವರು ನಿತ್ಯದ ಕಾಯಕ ಮಾಡುತ್ತಿದ್ದರು. ರಾತ್ರಿ 8 ಗಂಟೆಗೆ ಅಡುಗೆ ಮಾಡಿದ ಅವರು ಹೊಟೇಲಿನಲ್ಲಿ ಕುಳಿತಿದ್ದು, ಅಲ್ಲಿಯೇ ಕುಸಿದು ಬಿದ್ದರು. ಇದನ್ನು ನೋಡಿದ ಚಂದ್ರಶೇಖರ ಶೆಟ್ಟಿ ಅವರು ತಕ್ಷಣ ಸುಧಾಕರ ಭಂಡಾರಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಅದಾದ ನಂತರ ರೋಟರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಂದ ಮುಂದೆ ವೆಂಕಟೇಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಅಲ್ಲಿಯೂ ತೃಪ್ತಿಯಾಗದ ಕಾರಣ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಈ ನಡುವೆ ಸುಧಾಕರ ಭಂಡಾರಿ ಅವರಿಗೆ ಪಾರ್ಶವಾಯು ತಗುಲಿತು. ಆರೈಕೆಯಲ್ಲಿದ್ದ ಅವರು ಜುಲೈ 14ರಂದು ಕೊನೆಯುಸಿರೆಳೆದರು.