ಬೇರೆ ಬೇರೆ ಪ್ರದೇಶದಿಂದ ಮುಂಡಗೋಡಿಗೆ ಬಂದ ಜನರಿಗೆ ಜ್ವರ ಬಂದಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿದಾಗ ಮಲೆರಿಯಾ ಹಾಗೂ ಡೇಂಗ್ಯು ದೃಢವಾಗಿದೆ. ಗೋವಾ, ಉಡುಪಿ ಹಾಗೂ ಬೆಂಗಳೂರಿನಿoದ ಬಂದವರಲ್ಲಿ ಈ ರೋಗ ಕಾಣಿಸಿಕೊಂಡಿದೆ.
Advertisement. Scroll to continue reading.
ಗೋವಾದಿAದ ಮುಂಡಗೋಡಿನ ಬಡ್ಡಿಗೇರಿಗೆ ಬಂದ ಮೂವರಿಗೆ ಮಲೆರಿಯಾ ಜ್ವರ ಬಂದಿದೆ. ಗೋವಾದಿಂದ ಕೊಪ್ಪಕ್ಕೆ ಬಂದಿದ್ದ ಒಬ್ಬರಲ್ಲಿ ಡೆಂಗ್ಯು ಕಾಣಿಸಿಕೊಂಡಿದೆ. ನೆಹರು ನಗರದಲ್ಲಿ ಎರಡು ಶಂಕಿತ ಡೆಂಗ್ಯು ಪೀಡಿತರಿದ್ದಾರೆ. ಅವರು ಉಡುಪಿಯಿಂದ ಬಂದವರಾಗಿದ್ದಾರ. ಮರಗಡಿ ದ್ಡಿ ಗ್ರಾಮದಲ್ಲಿ ಒಬ್ಬರಿಗೆ ಅದೇ ಲಕ್ಷಣದ ಜ್ವರ ಬಂದಿದೆ. ಅವರು ಬೆಂಗಳೂರಿನಿoದ ಮುಂಡಗೋಡಿಗೆ ಬಂದವರಾಗಿದ್ದಾರೆ. ಈ ಎಲ್ಲರಿಗೂ ಆರೋಗ್ಯ ಅಧಿಕಾರಿಗಳು ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
Advertisement. Scroll to continue reading.
ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ ರಮೇಶ್ ರಾವ್, ಕೀಟಶಾಸ್ತ್ರತಜ್ಞರಾದ ಜೋತ್ಸ್ನಾ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರು ವಿವಿಧ ಆರೋಗ್ಯ ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಕರಣ ಕಂಡು ಬಂದ ಸ್ಥಳಗಳಲ್ಲಿ ಜ್ವರ ಸಮೀಕ್ಷೆ ಮತ್ತು ಸೊಳ್ಳೆ ನಿಯಂತ್ರಣದ ಲಾರ್ವ ಸಮೀಕ್ಷೆ ಮಾಡುತ್ತಿದ್ದಾರೆ. ಸೊಳ್ಳೆಗಳಿಂದ ಹರಡುವ ಕಾಯಿಲೆ ಬಗ್ಗೆ ಸಾರ್ವಜನಿಕರಿಗೆ, ಹಾಸ್ಟೆಲ್ ನ ಮಕ್ಕಳಿಗೆ ಮತ್ತು ಶಾಲೆಯ ಮಕ್ಕಳಿಗೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ.