ಶಿರಸಿ ಬಚಗಾಂವ್’ನ ಗಣಪತಿ ಮಡಿವಾಳ ಅವರು 300 ಅಡಿ ದೂರದವರೆಗೂ ಆಯುಧ ಎಸೆಯುವ ತಾಕತ್ತು ಹೊಂದಿದ್ದಾರೆ. 300 ಅಡಿ ದೂರದಿಂದ ಹಾರಿಬಂದ ಗುದ್ದಲಿಯಿಂದ ತಪ್ಪಿಸಿಕೊಂಡ ಅದೇ ಊರಿನ ವೆಂಕಟ್ರಮಣ ಹೆಗಡೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ!
Advertisement. Scroll to continue reading.
ಶಿರಸಿಯ ಬಚಗಾಂವಿನಲ್ಲಿ ವೆಂಕಟ್ರಮಣ ವಿಶ್ವೇಶ್ವರ ಹೆಗಡೆ ಅವರು ವಾಸವಾಗಿದ್ದಾರೆ. ಅವರು ಅಲ್ಲಿ ಸರ್ವೇ ನಂ 95/1ರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್ 1ರಂದು ಮನೆ ಕೆಲಸ ಮುಗಿಸಿ ಮರಳುವಾಗ ಅವರಿಗೆ 300 ಮೀ ದೂರದಲ್ಲಿ ಅದೇ ಊರಿನ ಗಣಪತಿ (ಧನಂಜಯ) ಮಡಿವಾಳ ಅವರು ಕಾಣಿಸಿದ್ದಾರೆ. ಅಲ್ಲಿಂದಲೇ ಗಣಪತಿ ಮಡಿವಾಳ ಅವರು ತಮ್ಮ ಕೈಯಲ್ಲಿದ್ದ ಗುದ್ದಲಿ ಬೀಸಿದ್ದಾರೆ. ಜೊತೆಗೆ ಕೆಟ್ಟದಾಗಿ ನಿಂದಿಸಿದ್ದಾರೆ. ಅದಾದ ನಂತರ ಸಮೀಪ ಆಗಮಿಸಿದ ಗಣಪತಿ ಮಡಿವಾಳ ಅವರು ವೆಂಕಟ್ರಮಣ ಹೆಗಡೆ ಅವರ ಕೆನ್ನೆಗೆ ಬಾರಿಸಿದ್ದಾರೆ. ಹೀಗಾಗಿ ಈ ವಿಷಯವನ್ನು ಗಣಪತಿ ಹೆಗಡೆ ಅವರು ಪೊಲೀಸರಲ್ಲಿ ಹೇಳಿದ್ದಾರೆ.
ಈ ವೇಳೆ ಅಲ್ಲಿ ದೊಡ್ಡ ಗದ್ದಲ ಶುರುವಾಗಿದ್ದು, ಊರಿನವರು ಬಂದು ಅದನ್ನು ತಪ್ಪಿಸಿದ್ದಾರೆ. ಆಗ, `ಈ ರಸ್ತೆಯಲ್ಲಿ ಓಡಾಡಿದರೆ ರಸ್ತೆ ಹಾಳು ಮಾಡುವೆ’ ಎಂದು ಗಣಪತಿ ಮಡಿವಾಳ ಅವರು ಹೇಳಿ ಅಲ್ಲಿಂದ ಹೋಗಿದ್ದಾರೆ. ಅದಾದ ನಂತರ ವೆಂಕಟ್ರಮಣ ಹೆಗಡೆ ಅವರಿಗೆ ಅನಾರೋಗ್ಯ ಕಾಡಿದ್ದು, ಚೇತರಿಸಿಕೊಂಡ ತರುವಾಯ ಗಣಪತಿ ಮಡಿವಾಳ ಅವರ ವಿರುದ್ಧ ಕೋರ್ಟಿಗೆ ಹೋಗಿ ಕೇಸು ಹಾಕಿದ್ದಾರೆ. ಈ ಕುರಿತು ನ್ಯಾಯಾಲಯ ಪೊಲೀಸರಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದೆ. 300 ಅಡಿ ದೂರದಿಂದ ಗುದ್ದಲಿ ಬಾಣ ಬಿಟ್ಟ ಕಥೆ ಕೇಳಿದ ಪೊಲೀಸರು ಪ್ರಕರಣ ದಾಖಲಿಸಿ, ಸತ್ಯಾಸತ್ಯತೆಯ ಬಗ್ಗೆ ತನಿಖೆ ಶುರು ಮಾಡಿದ್ದಾರೆ.
Advertisement. Scroll to continue reading.