ಶಿರಸಿಯ ಕಲಾ ಮತ್ತು ವಿಜ್ಞಾನ ಕಾಲೇಜ್ನಲ್ಲಿ ವಿಜ್ಞಾನ ಪದವಿಪಡೆದಿರುವ ಅಕ್ಷಯ ಮಾಶೇಲ್ಕರ್ ಅವರು ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದು, ಅವರ ಸಾಧನೆ ರಾಷ್ಟ್ರಪತಿಗಳ ಗಮನಸೆಳೆದಿದೆ. ಅಕ್ಷಯ ಮಾಶೇಲ್ಕರ್ ಅವರ ಸಂಶೋಧನೆ ಗಮನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿರಸಿ ಹುಡುಗನ ಸಾಧನೆಯನ್ನು ಬಣ್ಣಿಸಿದ್ದಾರೆ.
ಉತ್ತರ ಕನ್ನಡದಂಥ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಆದರೆ, ಮೂಲ ಸೌಕರ್ಯ ಹಾಗೂ ಹಣಕಾಸಿನ ಕೊರತೆಯಿಂದ ಅನೇಕರು ಸಂಶೋಧನೆಯAಥ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥ ಶಾಲೆಗಳ ಮಕ್ಕಳಿಗಾಗಿ ಅಕ್ಷಯ ಮಾಶೇಲ್ಕರ್ ಅವರು `ಪೋರ್ಟಬಲ್ ಲ್ಯಾಬ್’ ಎಂಬ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಶಿರಸಿಯಲ್ಲಿ ಓದಿ ಬೆಳೆದ ಅಕ್ಷಯ ಮಾಶೇಲ್ಕರ್ ಅವರ ಈ ಪೋರ್ಟಬಲ್ ಲ್ಯಾಬ್ ಕಿಟ್ ಇದೀಗ ದೇಶ ಮಟ್ಟದಲ್ಲಿ ಗಮನ ಸೆಳೆದಿದೆ. ಸ್ಥಳೀಯ ಸವಾಲುಗಳನ್ನು ಎದುರಿಸಿ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆಗಳನ್ನು ತರಬಹುದಾದ ತಳಮಟ್ಟದ 26 ಸಂಶೋಧಕರನ್ನು (ಗ್ರಾಸ್ರೂಟ್ ಇನ್ನೋವೆಟರ್ಸ್) ಭಾರತ ಸರ್ಕಾರದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ ಗುರುತಿಸಿದ್ದುಮ ಅದರಲ್ಲಿ ಶಿರಸಿಯ ಅಕ್ಷಯ ಮಾಶೇಲ್ಕರ್ ಅವರ ಸಂಶೋಧನೆಯೂ ಪ್ರಮುಖವಾಗಿದೆ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಸ್ವತಃ ಅಕ್ಷಯ ಅವರ ಸಂಶೋಧನೆಯ ಬಗ್ಗೆ ಆಸಕ್ತಿಯಿಂದ ಕೇಳಿದ್ದಾರೆ.
ನೈಜ ಪ್ರಪಂಚದ ವಾಸ್ತವ ಹಾಗೂ ತರಗತಿಯ ಕಲಿಕೆ ನಡುವಿನ ಅಂತರವನ್ನು ಕಡಿಮೆ ಮಾಡಲು ಅಕ್ಷಯ ಅವರ ಅವರು ಎಕ್ಸ್ಪರಿಮೈಂಡ್ ಲ್ಯಾಬ್ಸ್ ಎಂಬ ಸಂಶೋಧನೆ ನಡೆಸಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳೊAದಿಗೆ ಅದು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಾಯೋಗಿಕ ಕಲಿಕಾ ವ್ಯವಸ್ಥೆ, ಶಿಕ್ಷಕರ ಸಾಮರ್ಥ್ಯ ವೃದ್ಧಿ, ಇನ್ನೋವೇಶನ್ ಲ್ಯಾಬ್ಗಳು, ಸುಲಭವಾಗಿ ಒಯ್ಯಬಹುದಾದ ಪೋರ್ಟಬಲ್ ಲ್ಯಾಬ್ಗಳು, ಶಿಕ್ಷಣ ಕಾರ್ಯಕ್ರಮಗಳು ಮತ್ತು ಯೋಜನೆ ಆಧಾರಿತ ಕಲಿಕಾ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳು ಸೈದ್ಧಾಂತಿಕ ಕಲಿಕೆಯಿಂದ ಹೊರಬಂದು ಸ್ವತಃ ಸಂಶೋಧಕರು, ಉದ್ಯಮಿಗಳಾಗಲು ಎಕ್ಸಪರಿಮೈಂಡ್ ಲ್ಯಾಬ್ಸ್ ಪ್ರೇರೇಪಿಸುತ್ತಿದೆ.
Advertisement. Scroll to continue reading.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿAಗ್, ಗಣಿತ (ಎಸ್ಟಿಇಎಂ) ಕೃತಕ ಬುದ್ಧಿಮತ್ತೆ (ಎಐ), ರೊಬಾಟಿಕ್ಸ್ ಮುಂತಾದ ಅಂಶಗಳನ್ನು ಒಳಗೊಂಡ ಅವರ ಪೋರ್ಟಬಲ್ ಲ್ಯಾಬ್ ಅನುಭವ ಆಧಾರಿತ ಕಲಿಕೆಗೆ ಅತ್ಯುಪಯುಕ್ತವಾಗಿದೆ. ಮಕ್ಕಳಲ್ಲಿ ಸೃಜನಶೀಲತೆ, ಡಿಸೈನ್ ಥಿಂಕಿoಗ್, ಸ್ಪರ್ಧಾತ್ಮಕ ಕೌಶಲ್ಯಗಳು ಮತ್ತು ಉದ್ಯಮಶೀಲತೆಯನ್ನು ಬೆಳೆಸುವಲ್ಲಿ ಈ ಸಾಧನ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಲು, ಆವಿಷ್ಕಾರಕ್ಕೆ ಉತ್ತೇಜ ನೀಡಲು, ಪ್ರಯೋಗಳನ್ನು ಮಾಡಲು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರೋತ್ಸಾಹಿಸಲು ಈ ಲ್ಯಾಬ್ ಅನುಕೂಲವಾಗಲಿದೆ. ಈ ಲ್ಯಾಬ್ ಸ್ಥಾಪನೆಗೆ ಪ್ರತ್ಯೇಕ ಕೊಠಡಿ ಕೂಡ ಅಗತ್ಯವಾಗಿಲ್ಲ.