`ಕಡಿಮೆ ಬೆಲೆಯಲ್ಲಿ ಶಾಪಿಂಗ್ ಮಾಡಬೇಕು. ಅಲ್ಲಿಯೇ ವಿವಿಧ ತಿನಿಸುಗಳನ್ನು ಆಹ್ವಾದಿಸಬೇಕು’ ಎನ್ನುವವರಿಗಾಗಿ ಯಲ್ಲಾಪುರದಲ್ಲಿ `ಸ್ವದೇಶಿ ಮೇಳ’ವನ್ನು ಸಂಘಟಿಸಲಾಗಿದೆ. ಸೆಪ್ಟೆಂಬರ್ 11ರಿಂದ ಶುರುವಾದ ಈ ಮೇಳ ಸೆ 13ರವರೆಗೆ ಲಕ್ಷ್ಮೀವೆಂಕಟ್ರಮಣ ಮಠದ ಸಭಾಭವನದಲ್ಲಿ ನಡೆಯಲಿದೆ.
ಗಣೇಶ ಹಬ್ಬದ ಅಂಗವಾಗಿ ಶಿವಮೊಗ್ಗದ ಗಜಮುಖ ಇವೇಂಟ್ಸ ಕಡೆಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. 20ರೂಪಾಯಿಯಿಂದಲೇ ಇಲ್ಲಿ ವಸ್ತುಗಳ ಮಾರಾಟ ನಡೆಯುತ್ತಿದೆ. ವಿವಿಧ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು, ಇಳಿಕಲ್ ಸೀರೆಗಳು ಜೊತೆ ನಿತ್ಯ ಬಳಕೆಯ ವಸ್ತುಗಳನ್ನು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗಿದೆ. ಆಯುರ್ವೇದ ಉತ್ಪನ್ನ, ಸಿರಿಧಾನ್ಯ, ಒನ್ ಗ್ರಾಂ ಗೋಲ್ಡ್ ಜ್ಯುವಲರಿಗಳ ಜೊತೆ ಮಕ್ಕಳ ಉಡುಪುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಬಂದಿದೆ.
ಇದರೊoದಿಗೆ ಬಗೆ ಬಗೆಯ ಉಪ್ಪಿನಕಾಯಿ, ಉತ್ತರ ಹಾಗೂ ದಕ್ಷಿಣ ಭಾರತದ ಆಹಾರ ಪದಾರ್ಥಗಳು ಮಾರಾಟಕ್ಕಿವೆ. ಆಹಾರ ವಿಭಾಗದಲ್ಲಿ ದೋಸೆ, ವಡೆ, ಚಾಟ್ಸ್, ಜಿಲೆಬಿ, ಹೋಳಿಗೆ, ಮೈಸೂರು ಪಾಕ್, ಜಾಮೂನು, ಚಕ್ಕುಳಿ, ಕರ್ಜಿಕಾಯಿ ಸೇರಿ ವಿವಿಧ ತಿನಿಸುಗಳಿವೆ. ನರ್ಸರಿ ಗಿಡಗಳನ್ನು ಸಹ ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಅವುಗಳ ಮಾರಾಟವೂ ಜೋರಾಗಿ ನಡೆದಿದೆ.
Advertisement. Scroll to continue reading.
ಉದ್ಯಮಿ ಬಾಲಕೃಷ್ಣ ನಾಯಕ ಅವರು ಈ ಮೇಳವನ್ನು ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು `ನಾವೆಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಬೇಕು. ನಮ್ಮ ನೆಲದ ಉದ್ದಿಮೆ ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು’ ಎಂದು ಕರೆ ನೀಡಿದ್ದಾರೆ. `ಒಂದೇ ಸ್ಥಳದಲ್ಲಿ ಅನೇಕ ಬಗೆಯ ಉತ್ಪನ್ನಗಳಿದ್ದು, ಅದರಿಂದ ಸಾರ್ವಜನಿಕರಿಗೂ ಅನುಕೂಲ. ಸ್ಥಳೀಯ ಉತ್ಪನ್ನಗಳು ಹಾಗೂ ಗೃಹೋದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ಇಂತಹ ಮೇಳಗಳಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದ್ದಾರೆ. ಮೇಳದ ಆಯೋಜಕ ರಮೇಶ ಎಂ ಅವರು ಅಲ್ಲಿಯೇ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.
#sponsored