ಜೊಯಿಡಾದ ರಾಮನಗರದಲ್ಲಿದ್ದ ಕೋಳಿ ಪಾರಂ ಒಂದನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಅಲ್ಲಿದ್ದ ಯಂತ್ರೋಪಕರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಗಲಾಟೆಯಲ್ಲಿ ಪಕ್ಕದ ಭೂಮಿಯವರೇ ಪ್ರಮುಖ ಆರೋಪಿಗಳಾಗಿದ್ದು, ಗಡಿ ಗಲಾಟೆ ಹಿನ್ನಲೆ ಸ್ವ ಉದ್ಯೋಗ ಮಾಡುತ್ತಿರುವವರ ಬದುಕು ಬೀದಿಗೆ ಬಿದ್ದಿದೆ.
Advertisement. Scroll to continue reading.
ಜೊಯಿಡಾದ ರಾಮನಗರ ಬಳಿಯ ಅಕ್ಕಾಳಿ ಗ್ರಾಮದಲ್ಲಿ ಆನಂದಿ ಕೃಷ್ಣ ಗೋಸಾವಿ ಅವರು ಆರು ಎಕರೆ ಜಮೀನು ಹೊಂದಿದ್ದಾರೆ. ಅವರ ಮಕ್ಕಳಾದ ರಮೇಶ ಗೋಸಾವಿ ಹಾಗೂ ಅಕ್ಷಯ ಗೋಸಾವಿ ಸೇರಿ ಅಲ್ಲಿ ಕೋಳಿ ಪಾರಂ ನಡೆಸುತ್ತಿದ್ದಾರೆ. ರಮೇಶ ಗೋಸಾವಿ ಅವರು ಕೆಪಿಸಿಯಲ್ಲಿ ಚಾಲಕರಾಗಿದ್ದು, ಬಿಡುವಿನ ವೇಳೆ ಈ ಪಾರಂ ಭೇಟಿ ಮಾಡುತ್ತಾರೆ. ಈ ಗೋಸಾವಿ ಕುಟುಂಬದ ಜಮೀನಿನ ಪಕ್ಕ ರಾಮನಗರ ಸೀತಾವಾಡದ ರಮೇಶ ಚಿಕ್ಕಲಕರ್ ಅವರು ಭೂಮಿ ಹೊಂದಿದ್ದು, ಅವರಿಬ್ಬರ ನಡುವೆ ಗಡಿ ಗಲಾಟೆ ನಡೆಯುತ್ತಿದೆ. ಅದರ ಮುಂದುವರೆದ ಭಾಗವಾಗಿ ಸದ್ಯ ಕೋಳಿ ಪಾರಂ ಧ್ವಂಸವಾಗಿದೆ.
ಅಗಸ್ಟ 19ರಂದು ಗೋಸಾವಿ ಕುಟುಂಬದ ಬೇಲಿ ಕಿತ್ತ ರಮೇಶ ಚಿಕ್ಕಲಕರ್ ಅವರು ತಮ್ಮ ಕುಟುಂಬದ ರೇಷ್ಮಾ ರಮೇಶ್ ಚಿಕ್ಕಲಕರ್ ಹಾಗೂ ರೋಹಿತ್ ಚಿಕ್ಕಲಕರ್ ಅವರ ಜೊತೆ ಬಂದು ಅಕ್ಷಯ ಗೋಸಾವಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಆ ದಿನ ಕೋಳಿ ಪಾರಂ ಸಹ ನಾಶ ಮಾಡುವುದಾಗಿ ಹೇಳಿದ್ದ ಅವರು ಅಗಸ್ಟ 3ರ ರಾತ್ರಿ ಜೊಯಿಡಾ ರಾಮನಗರ ಹನುಮಾನಗಲ್ಲಿಯ ನಾಗೇಶ ಪಾಂಡುರAಗ ದೇಸಾಯಿ, ನಿತೇಶ ನಾಗೇಶ ದೇಸಾಯಿ, ದೀಪಕ ನಾಗೇಶ ದೇಸಾಯಿ, ಪಪೋಟ ಪಾಂಡುರAಗ ದೇಸಾಯಿ, ಅಪ್ಪಾಜಿ ಪಾಂಡುರAಗ ದೇಸಾಯಿ ಅವರ ಜೊತೆ ಆಗಮಿಸಿ ಇಡೀ ಪಾರಂ ಹಾಳು ಮಾಡಿದ್ದಾರೆ. ಜೊತೆಗೆ ಆ ಕೋಳಿ ಪಾರಂ ಬಳಿಯಿದ್ದ ಹುಲ್ಲು ಕತ್ತರಿಸುವ ಯಂತ್ರವನ್ನು ಕದ್ದು ಸಾಗಿಸಿದ್ದಾರೆ.
Advertisement. Scroll to continue reading.
ಈ ಕುರಿತು ರಮೇಶ ಗೋಸಾವಿ ಅವರು ಅಳಲು ತೋಡಿಕೊಂಡಿದ್ದಾರೆ. ನ್ಯಾಯಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದು, ರಾಮನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.