Advertisement. Scroll to continue reading.
`ಯಲ್ಲಾಪುರದ ಹೆಬ್ಬಾರ್ ನಗರದಲ್ಲಿ ಬಡವರಿಗೆ ವಿತರಿಸುವ ಮನೆ ಶ್ರೀಮಂತರ ಪಾಲಾಗುತ್ತಿದೆ. ಇಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆವಹಿಸಿ ತನಿಖೆ ನಡೆಸಬೇಕು’ ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ.
ಈ ಕುರಿತು ಬಿಜೆಪಿ ಮಂಡಳಾಧ್ಯಕ್ಷ ಪ್ರಸಾದ ಹೆಗಡೆ ಸುದ್ದಿಗೋಷ್ಠಿ ನಡೆಸಿದ್ದು `ಹೆಬ್ಬಾರ್ ನಗರದಲ್ಲಿ ನಿರ್ಮಿಸಿದ ಜಿ+2 ಮನೆಯ ಹಂಚಿಕೆಯಲ್ಲಿನ ಅಕ್ರಮ-ಅವ್ಯವಹಾರಗಳು ಶಿವರಾಮ ಹೆಬ್ಬಾರ್ ಅವರಿಗೆ ಆದ ಅವಮಾನ’ ಎಂದು ವಾದಿಸಿದ್ದಾರೆ. `ನಾಲ್ಕು ದಶಕಗಳ ಕಾಲ ಯಲ್ಲಾಪುರದಲ್ಲಿ ಶಿವರಾಮ ಹೆಬ್ಬಾರ್ ಅವರು ರಾಜಕಾರಣ ಮಾಡಿದ್ದಾರೆ. ಆದರೆ, ಪಟ್ಟಣ ಪಂಚಾಯತ ಅಧಿಕಾರಿಗಳು ಅವರ ಹೆಸರು ಹಾಳು ಮಾಡುತ್ತಿದ್ದಾರೆ. ಬಡವರಿಗಾಗಿ ನಿರ್ಮಿಸಿದ ಮನೆಗಳ ಪ್ರದೇಶಕ್ಕೆ ಹೆಬ್ಬಾರ್ ನಗರ ಎಂದು ಹೆಸರಿಟ್ಟು ಅಲ್ಲಿ ತಾರತಮ್ಯ ನೀತಿ ಅನುಸರಿಸಿರುವುದು ಹಾಗೂ ಅವ್ಯವಹಾರ ನಡೆಸಿರುವುದು ವಿಫಲ ಆಡಳಿತಕ್ಕೆ ಸಾಕ್ಷಿ’ ಎಂದು ಹೇಳಿದ್ದಾರೆ.
`ಇಲ್ಲಿ ಮನೆ ಇಲ್ಲದವರಿಗೆ ಮನೆ ಸಿಕ್ಕಿಲ್ಲ. ದುಡ್ಡಿದ್ದ ಅನೇಕರಿಗೆ ಮನೆ ಸಿಕ್ಕಿದೆ. ಈ ಬಗ್ಗೆ 10 ದಿನಗಳ ಒಳಗೆ ಕಾರಣ ಹಾಗೂ ಸ್ಪಷ್ಠೀಕರಣ ಸಿಗದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಕೂರುತ್ತೇವೆ’ ಎಂದು ಪ್ರಸಾದ ಹೆಗಡೆ ಅವರು ಘೋಷಿಸಿದ್ದಾರೆ. `ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ. ಬಡವರಿಗೆ ನ್ಯಾಯ ಕೊಡಿಸದೇ ಅಲ್ಲಿಂದ ಏಳುವುದಿಲ್ಲ’ ಎಂದು ಮಾತನಾಡಿದ್ದಾರೆ. ವಕೀಲ ಗಣೇಶ ಪಾಟಣಕರ್ ಅವರು ಮಾತನಾಡಿ `ಮನೆ ಹಂಚಿಕೆ ವಿಷಯದಲ್ಲಿ ನಿಯಮಾವಳಿಗಳ ಉಲ್ಲಂಘನೆ ನಡೆದಿದೆ. ವಿವಿಧ ಅಂಗಡಿಹೊoದಿದವರಿಗೆ, ಬೇರೆ ಕಡೆ ಭೂಮಿ ಹೊಂದಿದವರಿಗೆ ಮನೆ ಕೊಡಲಾಗಿದೆ. ಇನ್ನೂ ಕೆಲವರು ಎರಡು ಮನೆಪಡೆದು ನಡುವಿನ ಗೋಡೆ ಒಡೆಯುತ್ತಿದ್ದಾರೆ. ಅದರಿಂದ ಅರ್ಹ ಬಡವರಿಗೆ ಅನ್ಯಾಯವಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಮಾತನಾಡಿ `ಶಾಸಕರ ಆಪ್ತ ವಲಯದವರಿಗೆ ಮಾತ್ರ ಇಲ್ಲಿ ಮನೆ ಸಿಕ್ಕಿದೆ. ಫಲಾನುಭವಿಗಳಿಂದ ನಿರಂತರ ವಸೂಲಿ ನಡೆಯುತ್ತಿದೆ. ಇಷ್ಟಾದರೂ ಕೊಳಚೆ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ದೂರಿದ್ದಾರೆ. ಮನೆಪಡೆದ ನಾಗರಾಜ ನಾಯ್ಕ ಅವರು ಮಾತನಾಡಿ, ರಾಜಸ್ಥಾನ-ಹಾವೇರಿಯವರಿಗೆ ಸಹ ಇಲಿ ಮನೆ ಕೊಡಲಾಗಿದೆ’ ಎಂಬ ಅಂಶ ಬಿಚ್ಚಿಟ್ಟಿದ್ದಾರೆ. ರವಿ ದೇವಾಡಿಗ ಸೇರಿ ಇನ್ನಿತರರು ಈ ಮಾತಿಗೆ ಧ್ವನಿಗೂಡಿಸಿದ್ದಾರೆ.
Advertisement. Scroll to continue reading.
Advertisement. Scroll to continue reading.