ದಾಂಡೇಲಿಯ ಕಾಲೇಜುವೊಂದರಲ್ಲಿ ಓದುತ್ತಿರುವ 16 ವರ್ಷದ ಮಕ್ಕಳಿಬ್ಬರು ಪ್ರೀತಿಸುತ್ತಿದ್ದು, ಅವರ ಪ್ರೀತಿಯಲ್ಲಿ ಒಡಕು ಮೂಡಿದೆ. ಈ ಹಿನ್ನಲೆ ಪ್ರೀತಿಸಿದ ಹುಡುಗನಿಗೆ ಆ ಹುಡುಗಿ ವಿಷ ಕುಡಿಸಿದ ಪ್ರಕರಣ ಬಯಲಾಗಿದೆ.
Advertisement. Scroll to continue reading.
ಜೊಯಿಡಾ ರಾಮನಗರದ ಸೂಪಾ ಬಳಿಯ ಜಗಲಪೇಟೆಯ ಲಕ್ಷಿö್ಮಗಲ್ಲಿಯಲ್ಲಿ ಸೂರ್ಯೋದಯ (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಹೆಸರು ಬದಲಿಸಿದೆ) ಅವರು ವಾಸವಾಗಿದ್ದಾರೆ. ಅವರು ದಾಂಡೇಲಿಯಲ್ಲಿ ಐಟಿಐ ಓದುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ತಮ್ಮ ಕ್ಲಾಸ್ಮೇಟ್ ಆಗಿರುವ ರುಕ್ಮಿಣಿ (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿಯ ಹೆಸರು ಬದಲಿಸಿದೆ) ಅವರನ್ನು ಪ್ರೀತಿಸುತ್ತಿದ್ದಾರೆ. ರುಕ್ಮಿಣಿ ಅವರು ಸಹ ಸುಯೋದಯ ಅವರನ್ನು ಪ್ರೀತಿಸುತ್ತಿದ್ದು, ಪ್ರೀತಿಯ ಸಂಕೇತವಾಗಿ ಅವರಿಬ್ಬರು ತಮ್ಮ ಮೊಬೈಲಿನಲ್ಲಿ ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಈ ನಡುವೆ ಅವರ ಪ್ರೀತಿಯಲ್ಲಿ ಬಿರುಕು ಮೂಡಿದ್ದು, ಹುಡುಗಿ ಸಂಬoಧ ಮುರಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ.
ಅಗಸ್ಟ 23ಕ್ಕೆ ಮೆಸೆಜ್ ಮಾಡಿದ ಆ ರುಕ್ಮಿಣಿ ಅವರು `ನೀ ಸಿಗಬೇಕು’ ಎಂದು ಸೂರ್ಯೋದಯ ಅವರಿಗೆ ಮೆಸೆಜ್ ಮಾಡಿದ್ದು, `ಕಾಲೇಜಿನ ಬಳಿ ಸಿಗೋಣ’ ಎಂದು ಸೂರ್ಯೋದಯ ಅವರು ರಿಪ್ಲೆ ಮಾಡಿದ್ದಾರೆ. ಅದಕ್ಕೆ ಒಪ್ಪದ ರುಕ್ಮಿಣಿ ಅವರು `ಮನೆಗೆ ಬಾ’ ಎಂದು ಆಹ್ವಾನ ನೀಡಿದ್ದಾರೆ. ಅದರಂತೆ, ಅಗಸ್ಟ 24ರ ಸಂಜೆ ಸೂರ್ಯೋದಯ ಅವರು ದಾಂಡೇಲಿಯಲ್ಲಿರುವ ರುಕ್ಮಿಣಿ ಅವರ ಮನೆಗೆ ಹೋಗಿದ್ದಾರೆ. ಆ ವೇಳೆ ಮನೆಯಲ್ಲಿ ರುಕ್ಮಿಣಿ ಮಾತ್ರವಿದ್ದು, ಪ್ರೀತಿಯ ಸಂಬAಧ ಮುರಿಯುವ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಸೂರ್ಯೋದಯ ಅವರು ಒಪ್ಪದಿದ್ದಾಗ ಮೊಬೈಲಿನಲ್ಲಿರುವ ಫೋಟೋಗಳನ್ನು ಕಾಣಿಸಿದ್ದಾರೆ. `ಈ ಎಲ್ಲಾ ಫೋಟೋ ನಿನ್ನ ಅಮ್ಮನಿಗೆ ಕಳುಹಿಸುವೆ. ಅವರಿಂದಲೇ ನಿನಗೆ ಹೊಡೆಸುವೆ’ ಎಂದು ಹೆದರಿಸಿದ್ದಾರೆ. `ಆ ಎಲ್ಲಾ ಫೋಟೋ ಡಿಲಿಟ್ ಮಾಡು’ ಎಂದು ಸೂರ್ಯೋದಯ ಅವರು ಮನವಿ ಮಾಡಿದ್ದಾರೆ.
Advertisement. Scroll to continue reading.
ಆಗ, ಚಹಾ ಕುಡಿಯುವ ಲೋಟದಲ್ಲಿ ನೀರಿನಂಥ ಪದಾರ್ಥ ತಂದಿರಿಸಿದ ರುಕ್ಮಿಣಿ ಅವರು `ಇದನ್ನು ಕುಡಿ’ ಎಂದು ತಾಕೀತು ಮಾಡಿದ್ದಾರೆ. `ಅದನ್ನು ಕುಡಿದರೆ ಫೋಟೋ ಡಿಲಿಟ್ ಮಾಡುವೆ’ ಎಂಬ ಭರವಸೆ ನೀಡಿದ್ದಾರೆ. ಭಯಗೊಂಡಿದ್ದ ಸೂರ್ಯೋದಯ ಅವರು ಕಣ್ಮುಚ್ಚಿ ಅದನ್ನು ಕುಡಿದಿದ್ದಾರೆ. ಆದರೆ, ಸ್ವಲ್ಪ ಕುಡಿಯುವುದರೊಳಗೆ ಅವರಿಗೆ ಅಸಹ್ಯವಾಗಿದೆ. ಹೀಗಾಗಿ ಅರ್ದ ಲೋಟದಲ್ಲಿನ ದ್ರವ ಮಾತ್ರ ಕುಡಿದು ಅವರು ಅಲ್ಲಿಂದ ಹೊರಗೆ ಬಂದಿದ್ದಾರೆ. ಅದಾದ ನಂತರ ಸೂರ್ಯೋದಯ ಅವರಿಗೆ ವಾಂತಿ ಬರಲು ಶುರುವಾಗಿದೆ. ಹಸಿರು ಬಣ್ಣದ ವಾಂತಿ ಮಾಡಿಕೊಂಡ ಅವರನ್ನು ಕುಟುಂಬದವರು ರಾಮನಗರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಬೆಳಗಾವಿಯ ಕೆಎಲ್ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ವೇಳೆ ಬೆಳಗಾವಿ ತಹಶೀಲ್ದಾರ್ ಹಾಗೂ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಸೂರ್ಯೋದಯ ಅವರ ಹೇಳಿಕೆಪಡೆದಿದ್ದಾರೆ. ಆ ಸನ್ನಿವೇಶದಲ್ಲಿಯೂ ಪ್ರೀತಿಸಿದ ಹುಡುಗಿ ಬಗ್ಗೆ ಯೋಚಿಸಿದ ಸೂರ್ಯೋದಯ ಅವರು `ಆಕೆಗೆ ಏನೂ ಸಮಸ್ಯೆ ಆಗಬಾರದು’ ಎಂದು ಭಾವಿಸಿ ಸುಳ್ಳು ಹೇಳಿದ್ದಾರೆ. `ಕಣ್ತಪ್ಪಿನಿಂದ ಕ್ರಿಮಿನಾಶಕ ಸೇವಿಸಿದೆ’ ಎಂದು ಅವರು ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಅದಾದ ನಂತರ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, ಸಮಸ್ಯೆ ದೊಡ್ಡದಾದಾಗ ಕುಟುಂಬದವರಲ್ಲಿ ಸತ್ಯ ವಿಚಾರ ಹೇಳಿದ್ದಾರೆ. ಪ್ರೀತಿಸಿದ ಹುಡುಗಿ ಕೊಲೆ ಮಾಡುವ ಉದ್ದೇಶದಿಂದಲೇ ಬೆದರಿಸಿ ವಿಷ ಕುಡಿಸಿದ ಬಗ್ಗೆ ಅರಿತು ಅವರು ಪೊಲೀಸರಲ್ಲಿ ಈ ವಿಷಯ ಬಾಯ್ಬಿಟ್ಟಿದ್ದಾರೆ. ರಾಮನಗರ ಠಾಣೆ ಪೊಲೀಸರು ಈ ಎಲ್ಲಾ ವಿಷಯ ಆಲಿಸಿ, ಅಪ್ರಾಪ್ತೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
`ಮಕ್ಕಳ ಚಲನ-ವಲನ ಬಗ್ಗೆ ನಿಗಾವಹಿಸಿ’