ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕು ಹಳ್ಳಕ್ಕೆ ಹಾರಿದ್ದು, ಆ ಬೈಕಿನಲ್ಲಿದ್ದ ಭಟ್ಕಳದ ಲೋಕೇಶ ದೇವಾಡಿಗ ಅವರು ಸಾವನಪ್ಪಿದ್ದಾರೆ. ಬೆಳಗಿನ ಅವಧಿಯಲ್ಲಿ ಹಳ್ಳದಲ್ಲಿ ಬೈಕಿನ ಜೊತೆ ಲೋಕೇಶ್ ದೇವಾಡಿಗ ಅವರ ಶವ ಸಿಕ್ಕಿದೆ.
ಭಟ್ಕಳದ ಶಿರಾಲಿ ಕೇಸುಮನೆಯ ಲೋಕೇಶ ದೇವಾಡಿಗ (31) ಅವರು ಶಿಲ್ಪಿಯಾಗಿದ್ದರು. ತಮ್ಮ ಕೆಲಸದ ಅಂಗವಾಗಿ ಅವರು ಬೇರೆ ಬೇರೆ ಊರುಗಳಿಗೆ ಸಂಚರಿಸುತ್ತಿದ್ದರು. ಅಕ್ಟೊಬರ್ 21ರ ರಾತ್ರಿ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಶಿರಾಲಿ ಕಡೆಯಿಂದ ಅಳ್ವೇಕೊಡಿಗೆ ಹೋಗುವ ರಸ್ತೆ ಮಾರ್ಗವಾಗಿ ಅವರು ಆ ರಾತ್ರಿ ಸಂಚರಿಸಿದ್ದರು.
ಅಳ್ವೇಕೊಡಿ ಕ್ರಾಸಿನಿಂದ ಮುಂದೆ ಕೇಸುಮನೆಗೆ ಹೋಗುವಾಗ ಅಲ್ಲಿನ ಸೇತುವೆ ಬಳಿ ಲೋಕೇಶ ದೇವಾಡಿಗ ಅವರ ಬೈಕಿನ ವೇಗ ಹೆಚ್ಚಿತು. ಆ ಬೈಕು ಸೇತುವೆ ಎಡಭಾಗ ಸಂಚರಿಸಿ ಹಳ್ಳಕ್ಕೆ ಬಿದ್ದಿತು. ಬೈಕಿನಿಂದ ಬಿದ್ದ ರಭಸಕ್ಕೆ ಲೋಕೇಶ ದೇವಾಡಿಗ ಅವರ ಉಸಿರು ನಿಂತಿತು.
ಅಕ್ಟೊಬರ್ 22ರಂದು ಹಳ್ಳದಲ್ಲಿ ಲೋಕೇಶ ದೇವಾಡಿಗ ಅವರ ಶವ ನೋಡಿದ ಜನ ಕುಟುಂಬಕ್ಕೆ ಮಾಹಿತಿ ನೀಡಿದರು. ಲೋಕೇಶ ಅವರ ತಂದೆ ಮಾದೇವ ದೇವಾಡಿಗ ಅವರು ಭಟ್ಕಳ ಗ್ರಾಮೀಣ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.