ಅಂಕೋಲಾದಲ್ಲಿ ಧರಣಿನಿರತ ನಾಗರಾಜ ನಾಯಕ ಹಾಗೂ ಅವರ ಎದುರಾಳಿ ಗೋಪಾಲಕೃಷ್ಣ ನಾಯಕ ಅವರ ನಡುವೆ ಇದೀಗ `ಸ್ಟೇಟಸ್’ ಸಮರ ಶುರುವಾಗಿದೆ. ನಾಗರಾಜ ನಾಯಕ ಹಾಗೂ ಗೋಪಾಲಕೃಷ್ಣ ನಾಯಕ ಇಬ್ಬರೂ ಒಂದೇ ರೀತಿಯ ಪೋಸ್ಟರನ್ನು ತಮ್ಮ ವಾಟ್ಸಪ್ ಸ್ಟೇಟಸ್’ಗೆ ಹಾಕಿಕೊಂಡಿದ್ದಾರೆ!
ಅಗ್ನಿ ಉರಿಯುತ್ತಿರುವ ಪಂಜಿನ ಚಿತ್ರದ ಜೊತೆ `ಸೂರ್ಯನಂತೆ ಇರಿ. ನಂಬಿದವರಿಗೆ ಬೆಳಕಾಗಿ.. ಉರ್ಕೋಳ್ಳೋರಿಗೆ ಬೆಂಕಿಯಾಗಿ’ ಎಂದು ಬರೆದ ಸ್ಟೇಟಸ್ ಆ ಎರಡೂ ನಾಯಕರ ವಾಟ್ಸಪ್’ನಲ್ಲಿ ಸರಿ ಸುಮಾರು ಏಕಕಾಲಕ್ಕೆ ಕಾಣಿಸಿಕೊಂಡಿದೆ. ಜೀವನಕ್ಕೆ ಸ್ಪೂರ್ತಿ ನೀಡುವ ಈ ಸಾಲುಗಳು ಪರಸ್ಪರ ಕಾಲೆಳೆಯವ ಹಾಗೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರೀತಿಯಲ್ಲಿಯೂ ಭಾಸವಾಗುತ್ತಿದೆ.
ಮಂಗಳವಾರ ರಾತ್ರಿ 8.24ಕ್ಕೆ ನಾಗರಾಜ ನಾಯಕ ಅವರು ಈ ಸ್ಟೇಟಸ್ ಅಪ್ಲೋಡ್ ಮಾಡಿದ್ದಾರೆ. 8.49ಕ್ಕೆ ಗೋಪಾಲಕೃಷ್ಣ ನಾಯಕ ಅವರು ಸಹ ಅದೇ ಸ್ಟೇಟಸ್ ಅಪ್ಲೋಡ್ ಮಾಡಿದ್ದಾರೆ. 25 ನಿಮಿಷದ ಅಂತರಲ್ಲಿ ಎರಡು ನಾಯಕರ ನಡುವೆ ಒಂದೇ ಸ್ಟೇಟಸ್ ನೋಡಿದ ಜನ ಅಚ್ಚರಿಗೆ ಒಳಗಾಗಿದ್ದಾರೆ. ಗೋಪಾಲಕೃಷ್ಣ ನಾಯಕ ಹಾಗೂ ನಾಗರಾಜ ನಾಯಕ ಇಬ್ಬರಿಗೂ ಅನೇಕರು ಅತ್ಯಂತ ಆಪ್ತರಾಗಿದ್ದು, ಸದ್ಯ ಅವರ ಸ್ಟೇಟಸ್ಸಿನಲ್ಲಿ ಕಾಣಿಸಿಕೊಂಡ ಪೋಸ್ಟರನ್ನು ಇಬ್ಬರಿಗೂ ಕಳುಹಿಸಿದ ವ್ಯಕ್ತಿಯೂ ಒಬ್ಬನೇ ಆಗಿರಬಹುದೇ? ಎಂಬ ಅನುಮಾನವೂ ಶುರುವಾಗಿದೆ.
ಇನ್ನೂ ನಾಗರಾಜ ನಾಯಕ ಅವರು ತಮ್ಮ ಪ್ರತಿಭಟನೆಯ ಇಡೀ ದಿನದ ವಿದ್ಯಮಾನವನ್ನು ಫೇಸ್ಬುಕ್ ಹಾಗೂ ವಾಟ್ಸಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಗೋಪಾಲಕೃಷ್ಣ ನಾಯಕ ಅವರ ಹೆಸರಿನಲ್ಲಿರುವ `ಅಭಿಮಾನಿ ಬಳಗ’ ಎಂಬ ಫೇಸ್ಬುಕ್ ಪುಟದಲ್ಲಿಯೂ ಇದೇ ಹೋರಾಟಕ್ಕೆ ಸಂಬoಧಿಸಿದ ಕೆಲ ಸಾಲುಗಳು ಆಗಾಗ ಕಾಣಿಸುತ್ತಿವೆ. ಜೊತೆಗೆ ಗೋಪಾಲಕೃಷ್ಣ ನಾಯಕ ಅವರು `ನಿಂದನೆ ಕೇಳಿದ ನಂತರವೂ ಶಾಂತವಾಗಿರುವ ವ್ಯಕ್ತಿ ಇಡೀ ಜಗತ್ತು ಗೆಲ್ಲುತ್ತಾನೆ’.. ಬಕೇಡ್ ಹಿಡಿದು ಸ್ನಾನ ಮಾಡಬೇಕು.. ಜೀವನ ಮಾಡಬಾರದು’ ಹಾಗೂ `ಕೆಲವರ ವಿರುದ್ಧ ಎಂದಿಗೂ ಸೇಡು ತೀರಿಸಿಕೊಳ್ಳಬೇಕಿಲ್ಲ. ಕೊಳತ ಹಣ್ಣು ತಾನಾಗಿಯೇ ಉದುರಿ ಹೋಗುತ್ತದೆ’ ಎಂಬ ಬರಹಗಳನ್ನುಹೊಂದಿದ ವಿಚಾರಧಾರೆಗಳನ್ನು ಸಹ ಶೇರ್ ಮಾಡುತ್ತಿದ್ದಾರೆ.