`ಸಚಿವ ಸಂಪುಟದಿAದ ಕೈಬಿಡುವ ಆತಂಕದಲ್ಲಿ ಪ್ರಚಾರಪಡೆಯುವ ಉದ್ದೇಶದಿಂದ ಪ್ರಿಯಾಂಕ್ ಖರ್ಗೆ ಆರ್ ಎಸ್ ಎಸ್ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ರಾಮು ನಾಯ್ಕ ಹೇಳಿದ್ದಾರೆ. `ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹುಚ್ಚುತನದ ಪರಮಾವಧಿ’ ಎಂದು ಅವರು ಹೇಳಿದ್ದಾರೆ.
`ಕಳೆದ ನೂರು ವರ್ಷಗಳಲ್ಲಿ ಮೂರು ತಲೆಮಾರು ಕಳೆದು ಹೋದರೂ ಸಂಘ-ಪರಿವಾರದವರನ್ನು ಬಡಿಯಲು ಕಾಂಗ್ರೆಸ್ಸಿನಿAದ ಆಗಲಿಲ್ಲ. ಆ ಪಕ್ಷದ ರಾಜಕೀಯ ನೇತಾರ ರಾಜೀವ ಗಾಂಧಿ, ಅವರಮ್ಮ ಇಂದಿರಾ ಗಾಂಧಿ, ಅವರಪ್ಪ ಜವಾಹರಲಾಲ ನೆಹರು ಯಾರಿಂದಲೂ ಸಂಘವನ್ನು ಬಗ್ಗಿಸಲು ಆಗಲಿಲ್ಲ. ಆರ್ ಎಸ್ ಎಸ್ ಇನ್ನೂ ಬೆಳೆಯುತ್ತಲೇ ಇದ್ದು, ಸಂಘ ರಾಷ್ಟ್ರವ್ಯಾಪಿ ಹೆಮ್ಮರವಾಗಿ ಬೆಳೆದಿದೆ’ ಎಂದವರು ವಿವರಿಸಿದ್ದಾರೆ.
`ಆರ್ ಎಸ್ ಎಸ್ ನಿಷೇಧ ಅಸಾಧ್ಯ ಎಂಬುದು ಖರ್ಗೆ ಅವರಿಗೂ ಗೊತ್ತು. ಆದರೆ, ತಾನು ಸಂಘವನ್ನು ಇಷ್ಟು ಬಹಿರಂಗವಾಗಿ ಟೀಕಿಸಿದ ಕಾರಣಕ್ಕಾಗಿಯಾದರೂ ರಾಹುಲ್ ಗಾಂಧಿ ಪ್ರಸನ್ನರಾಗಿ, ತಮ್ಮ ಸಚಿವ ಸ್ಥಾನ ಅಬಾಧಿತವಾಗಿ ಉಳಿಯಸಬಹುದು ಎಂಬ ಲೆಕ್ಕಾಚಾರದಿಂದ ಅವರು ಹುಚ್ಚುತನ ಪ್ರದರ್ಶಿಸಿದ್ದಾರೆ’ ಎಂದು ರಾಮು ನಾಯ್ಕ ವಿಶ್ಲೇಷಿಸಿದ್ದಾರೆ.