• Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 17ರ ದಿನ ಭವಿಷ್ಯ

November 16, 2025
Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

November 16, 2025
Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

November 16, 2025
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 17ರ ದಿನ ಭವಿಷ್ಯ

November 16, 2025
Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

November 16, 2025
Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

November 16, 2025
  • Home
  • Janamata
Sunday, November 16, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹುಬ್ಬಳ್ಳಿಯ ಈ ರೈಲು ತಾಳಗುಪ್ಪಕ್ಕೆ ತೆರಳಲಿದೆ.. ಶಿರಸಿಯಲ್ಲಿ ಸರ್ವೆ ಕಾರ್ಯ ಶುರುವಾಗಿದೆ!

Achyutkumar by Achyutkumar
October 9, 2025
This train from Hubballi will go to Talaguppa.. Survey work has begun in Sirsi!
Share on FacebookShare on WhatsappShare on Twitter
ADVERTISEMENT

ಭವಿಷ್ಯದಲ್ಲಿ ಹುಬ್ಬಳ್ಳಿಯಿಂದ ಹೊರಡುವ ರೈಲು ಶಿರಸಿ ಮಾರ್ಗವಾಗಿ ತಾಳಗುಪ್ಪಕ್ಕೆ ತೆರಳಲಿದ್ದು, ಈ ಮಾರ್ಗದ ರೈಲು ಹಳಿ ನಿರ್ಮಾಣ ಸಮೀಕ್ಷೆ ಜೋರಾಗಿದೆ. ಈ ಯೋಜನೆಗಾಗಿ ಕಳೆದ ವರ್ಷವೇ ಗಡಿ ಗುರುತು ಮಾಡಲಾಗಿದ್ದರೂ ಇದೀಗ ಎರಡನೇ ಹಂತರ ಸರ್ವೇ ಶುರುವಾಗಿದೆ.

ADVERTISEMENT

ಈ ಮಾರ್ಗದ ರೈಲ್ವೇ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಸಿದ್ದಾಪುರ ರೈಲು ಹೋರಾಟ ಸಮಿತಿ ಸಹ ಈ ಯೋಜನೆಗಾಗಿ ಸಾಕಷ್ಟು ಹೋರಾಟ ನಡೆಸಿದೆ. ಸಾಧ್ಯವಾದಷ್ಟರ ಮಟ್ಟಿಗೆ ಅರಣ್ಯ ಭೂಮಿ ತಪ್ಪಿಸಿ ಕೃಷಿ ಹಾಗೂ ಪಾಳುಬಿದ್ದ ಭೂಮಿ ಬಳಸಿಕೊಂಡು ರೈಲ್ವೆ ಮಾರ್ಗ ಸಿದ್ಧಪಡಿಸಲಾಗುತ್ತಿದೆ. ಸದ್ಯ ಬೆಂಗಳೂರಿನ ಆರ್ ವಿ ಕಂಪನಿಯ ಎರಡು ತಂಡ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದೆ.

ADVERTISEMENT

ಬೆಟ್ಟ-ಗುಡ್ಡಗಳು ಹೆಚ್ಚಿರುವ ಮಲೆನಾಡು ಪ್ರದೇಶದಲ್ಲಿ ಬಯಲು ಹಾಗೂ ಗದ್ದೆ ಮಾರ್ಗಗಳಲ್ಲಿ ರೈಲು ಸಂಚಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಗುಡ್ಡ ಪ್ರದೇಶವಿರುವ ಹದಿನಾರನೇ ಮೈಲುಕಲ್ಲು, ನಾಣಿಕಟ್ಟಾ, ಕಾನಸೂರು, ಅಜ್ಜಿಬಳ-ಕಾನಗೋಡ ಭಾಗಗಳಲ್ಲಿ ರೈಲ್ವೆ ಮಾರ್ಗ ಬರುವ ಸಾಧ್ಯತೆಗಳಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶದಿಂದಲೂ ರೈಲು ಮಾರ್ಗ ಅಂತರ ಕಾಯ್ದುಕೊಂಡಿದೆ. ಮಾಹಿತಿಗಳ ಪ್ರಕಾರ ಶಿರಸಿ ಅಂಡಗಿ ಮಾರ್ಗವಾಗಿ 3ಕಿಮೀ ಆಚೆಗೆ ಸರ್ವೇ ನಡೆದಿದ್ದು, ಎಲ್ಲವೂ ಸರಿಯಾಗಿ ನಡೆದರೆ 2 ವರ್ಷದೊಳಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ. ಸಾಧ್ಯವಾದಷ್ಟರ ಮಟ್ಟಿಗೆ ಪರಿಸರ ಹಾನಿ ತಪ್ಪಿಸಿ ಹೊಸ ಮಾರ್ಗ ರಚಿಸಲಾಗಿದೆ

ADVERTISEMENT

ರೈಲ್ವೆ ಇಲಾಖೆಯ ಪ್ರಿಲಿಮಿನರಿ ಎಂಜಿನಿಯರಿoಗ್ & ಟ್ರಾಫಿಕ್ ಸರ್ವೆಯಲ್ಲಿ ಹೊಸ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಹಾಗೂ ರೈಲು ನಿಲ್ದಾಣಗಳ ಕುರಿತು ವಿವರ ಪ್ರಕಟಿಸಲಾಗಿದೆ. ಅದರ ಪ್ರಕಾರ ತಾಳಗುಪ್ಪಾದಿಂದ ಕಾವಂಚೂರು ಮಾರ್ಗವಾಗಿ ಸಿದ್ದಾಪುರಕ್ಕೆ ಆಗಮಿಸುವ ಈ ರೈಲು ಮಾರ್ಗ ನಂತರ ಕುಣಜಿ-ತೆಲಗುಂದ್ಲಿ- ಒಡ್ಡಿನಕೊಪ್ಪ ಮಾರ್ಗವಾಗಿ ಶಿರಸಿಗೆ ಬರಲಿದೆ. ನಂತರ ಮಳಲಗಾಂವ್-ಕಾತೂರು ಮಾರ್ಗವಾಗಿ ಮುಂಡಗೋಡಕ್ಕೆ ತೆರಳಲಿದೆ. ತದನಂತರದಲ್ಲಿ ತಡಸ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣ ತಲುಪಲಿದೆ.

ಸಿದ್ದಾಪುರ ತಾಲೂಕಿನ ಕಾವಂಚೂರು, ಸಿದ್ದಾಪುರ ಹಾಗೂ ಕುಣಜಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ತೆಲಗುಂದ್ಲಿ, ಶಿರಸಿ ತಾಲೂಕಿನಲ್ಲಿ ಒಡ್ಡಿನಕೊಪ್ಪ, ಒಕ್ಕಲಕೊಪ್ಪ, ಗೌಡಳ್ಳಿ, ಮಳಲಗಾಂವ್ ಹಾಗೂ ಗೋಟಗಾಡಿ ಬಳಿ ನಿಲ್ದಾಣ ಸ್ಥಾಪನೆಗೆ ನಕ್ಷೆ ಸಿದ್ಧವಾಗಿದೆ. ಮುಂಡಗೋಡ ತಾಲೂಕಿನಲ್ಲಿ ಕಾತೂರು, ಮುಂಡಗೋಡ ಹಾಗೂ ಅಷ್ಟಕಟ್ಟಿಯಲ್ಲಿ ರೈಲು ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ನಕ್ಷೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ತಡಸ ಹಾಗೂ ಧಾರವಾಡ ಜಿಲ್ಲೆಯಲ್ಲಿ ಬೆಳಗಲಿ ಬಳಿ ರೈಲ್ವೆ ನಿಲ್ದಾಣ ಬರಲಿದೆ.

ತಾಳಗುಪ್ಪಾ-ಹುಬ್ಬಳ್ಳಿ ಮಾರ್ಗದಲ್ಲಿ ಸಿದ್ದಾಪುರ-ಶಿರಸಿ-ಮುಂಡಗೋಡ ಹಾಗೂ ತಡಸಗಳು ಪ್ರಮುಖ ನಿಲ್ದಾಣಗಳಾಗಲಿದೆ. ಸಿದ್ದಾಪುರ ನಿಲ್ದಾಣವು ಸಿದ್ದಾಪುರ-ಕೊಂಡ್ಲಿ ನಡುವಿನ ಗದ್ದೆ ಬಯಲಿನಲ್ಲಿ ರೈಲ್ವೆ ಮಾರ್ಗದ 17 ಹಾಗೂ 18 ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ಶಿರಸಿ ನಿಲ್ದಾಣವು ಗೌಡಳ್ಳಿಯಿಂದ ಮುಂದೆ ಒಕ್ಕಲಕೊಪ್ಪ ಬಳಿ ರೈಲ್ವೆ ಮಾರ್ಗದ 66ನೇ ಕಿಲೋಮೀಟರ್‌ನಲ್ಲಿ ನಿರ್ಮಾಣವಾಗಲಿದೆ. ಮುಂಡಗೋಡ ರೈಲ್ವೆ ನಿಲ್ದಾಣವು ಮುಂಡಗೋಡ ಪಟ್ಟಣದಿಂದ 4 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 116 ಹಾಗೂ 117ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ. ತಡಸ ನಿಲ್ದಾಣವು ತಡಸ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿ ರೈಲ್ವೆ ಮಾರ್ಗದ 142 ಹಾಗೂ 143ನೇ ಕಿಲೋಮೀಟರ್ ನಡುವೆ ನಿರ್ಮಾಣವಾಗಲಿದೆ.

ಶಿರಸಿ-ಹಾವೇರಿ ರೈಲ್ವೆ ಮಾರ್ಗ ನಿರ್ಮಾಣದ ಯೋಜನೆಗೂ ಪೂರಕವಾಗುವಂತೆ ಈ ರೈಲ್ವೆ ಮಾರ್ಗ ಸಿದ್ಧಪಡಿಸಲಾಗಿದೆ. ಅದರ ಪ್ರಕಾರ ಶಿರಸಿ ತಾಲೂಕಿನ ಮಳಲಗಾಂವ್‌ನಲ್ಲಿ ಜಂಕ್ಷನ್ ಆಗುವ ಸಾಧ್ಯತೆ ಹೆಚ್ಚಿದೆ.

Share1178SendTweet736
ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A man who earned three paise a month looted three crores!

ಮೂರು ಕಾಸಿನ ಸಂಬಳಕ್ಕಿದ್ದವ ಮೂರು ಕೋಟಿ ಕೊಳ್ಳೆಹೊಡೆದ!

October 25, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ನವೆಂಬರ್ 17ರ ದಿನ ಭವಿಷ್ಯ

November 16, 2025
Transport to Karwar's Kona Kiravatti Unprepared people caught the thieves who lied!

ಕಾರವಾರದ ಕೋಣ ಕಿರವತ್ತಿಗೆ ಸಾಗಾಟ: ಸುಳ್ಳು ಹೇಳಿದ ಕಳ್ಳರನ್ನು ಹಿಡಿದ ಸಿದ್ದರದ ಜನ!

November 16, 2025
Farmers' interest in Kagga paddy Paddy cultivation in a hundred acres of land!

ಕಗ್ಗ ಭತ್ತಕ್ಕೆ ಕೃಷಿಕರ ಆಸಕ್ತಿ: ನೂರು ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ!

November 16, 2025

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋