ಮುಂಡಗೋಡದ ಟಿಬೆಟಿಯನ್ ಕ್ಯಾಂಪಿನಲ್ಲಿ ಅನೇಕ ಅಕ್ರಮ ಕಟ್ಟಡಗಳಿದ್ದು, ಆ ಬಗ್ಗೆ ಅರಿವಿದ್ದರೂ ಯಾರೂ ಪ್ರಶ್ನಿಸುತ್ತಿಲ್ಲ. ಕಟ್ಟಡ ಕಾರ್ಮಿಕರಿಗೆ ಸುರಕ್ಷತೆ ಇಲ್ಲದ ಕಾರಣ ಇಲ್ಲಿ ಇಬ್ಬರ ಸಾವಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿದವರಿಲ್ಲ.
Advertisement. Scroll to continue reading.
ಚೀನಾದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ನಿರಾಶ್ರಿತರಾದವರಿಗೆ ಭಾರತ ಸರ್ಕಾರ ಆಶ್ರಯ ನೀಡಿದ್ದು, ಮುಂಡಗೋಡದಲ್ಲಿಯೂ ಅವರಿಗಾಗಿ ಟಿಬೆಟಿಯನ್ ಕಾಲೋನಿ ನಿರ್ಮಿಸಿತು. ಮುಂಡಗೋಡಿನ ಇಂದೂರು, ಹುನಗುಂದ, ನಂದಿಟ್ಟ, ಗುಂಜಾವತಿ ಗ್ರಾಪಂ ವ್ಯಾಪ್ತಿಯ 4032ಎಕರೆ ಅರಣ್ಯ ಭೂಮಿಯನ್ನು ಗುರುತಿಸಿ ಟಿಬೆಟಿಯನ್ ನಿರಾಶ್ರಿತರ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಗಿತ್ತು. 1966ರಲ್ಲಿ ಡೊಂಗ್ ಲಿಂಗ್, ಟಿಬೆಟಿಯನ್ ಸೆಟಲ್ ಮೆಂಟ್ ಶುರುವಾಗಿದ್ದು, ಆ ವೇಳೆ 4302 ಟಿಬೆಟಿಯನ್ ಕುಟುಂಬ ಹಾಗೂ ಬೌದ್ಧ ಬಿಕ್ಕುಗಳು ಆಗಮಿಸಿ ವಾಸ್ತವ್ಯ ಹೂಡಿದರು. ಇದೀಗ ಆ ಸಂಖ್ಯೆ 8376ಕ್ಕೆ ಏರಿಕೆಯಾಗಿದೆ.
Advertisement. Scroll to continue reading.
ಸಂಖ್ಯೆ ಏರಿದ ಹಾಗೇ ಸೌಕರ್ಯಗಳು ಹೆಚ್ಚಾಗಿದ್ದು, ಮೊದಲು ತಾತ್ಕಾಲಿಕ ಶೆಡ್’ಗಳಲ್ಲಿ ವಾಸವಿದ್ದವರು ಇದೀಗ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಅದು ಮುಂದುವರೆದು ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಟಿಬೆಟಿಯನ್ ನಿರಾಶ್ರಿತರ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಭಾರತ ಸರ್ಕಾರದ ಗೃಹ ಇಲಾಖೆಯಡಿ ಸೆಂಟ್ರಲ್ ಟಿಬೆಟಿಯನ್ ಅಡ್ಮಿನಿಸ್ಟ್ರೆಷನ್ (ಸಿಟಿಎ) ರೂಪಿಸಿದೆ. ಅದರ ಮೂಲಕ ಇಲ್ಲಿನ ಅರಣ್ಯ ಭೂಮಿಯನ್ನು ಲೀಸ್’ಗೆ ನೀಡಲಾಗಿದೆ. ಸಿಟಿಎ ನಿಯಮದಂತೆ ಅಲ್ಲಿ ಯಾವುದೇ ಹೊಸ ಶಾಶ್ವತ ಕಟ್ಟಡ ನಿರ್ಮಾಣ ಮಾಡಬೇಕಾದರೆ ಸ್ಥಳಿಯ ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು. ಸ್ಥಳೀಯ ಆಡಳಿತದ ಪರವಾನಿಗೆ ಪಡೆಯಬೇಕು. ತೆರಿಗೆ ಪಾವತಿಸಬೇಕು. ಅನುಮೋದನೆ ಇಲ್ಲದೇ ಕಟ್ಟಡ ನಿರ್ಮಿಸುವ ಹಾಗಿಲ್ಲ. ಹೀಗೆಲ್ಲ ಇದ್ದರೂ ಆ ಯಾವ ನಿಯಮಗಳು ಇಲ್ಲಿ ಪಾಲನೆ ಆಗುತ್ತಿಲ್ಲ.
ಈ ಎಲ್ಲದರ ನಡುವೆ ಕಟ್ಟಡ ನಿರ್ಮಾಣಕ್ಕೆ ಬಂದಿದ್ದ ಕಾರ್ಮಿಕರಿಬ್ಬರು ಇಲ್ಲಿ ಸಾವನಪ್ಪಿದ್ದಾರೆ. ನಾಲ್ಕನೇ ಮಹಡಿಯಿಂದ ಬಿದ್ದು ಬಸಾಪುರ ಗ್ರಾಮದ ಸಂದೇಶ ನಾಗರಾಜ ಚಲವಾದಿ (23) ಅವರು ಕೊನೆಯುಸಿರೆಳೆದಿದ್ದಾರೆ. ಈ ಹಿಂದೆ ಸಹ ಮತ್ತೊಬ್ಬ ಕಾರ್ಮಿಕರು ಇಲ್ಲಿ ಬಿದ್ದು ಸಾವನಪ್ಪಿದ್ದು, ಕಾರ್ಮಿಕರು ಬೀಳುವುದು ಇಲ್ಲಿ ಹೊಸತಲ್ಲ. ಗಾಯಗೊಂಡವರ ಸಂಖ್ಯೆ ಲೆಕ್ಕವಿಟ್ಟವರಿಲ್ಲ.